ಹಿರಿಯರ ತ್ಯಾಗ,ಬಲಿದಾನದಿಂದ ಬಿಜೆಪಿ ಉದಯ: ಅಣವೀರ ಇಂಗಿನಶೆಟ್ಟಿ

0
124

ಶಹಾಬಾದ:ಹಿರಿಯರ ತ್ಯಾಗ,ಬಲಿದಾನದಿಂದ ೧೯೮೦ರಲ್ಲಿ ಉದಯವಾದ ಭಾರತೀಯ ಜನತಾ ಪಾರ್ಟಿ ಇಂದು ದೇಶದಲ್ಲಿಯೇ ದೊಡ್ಡ ಪಕ್ಷವಾಗಲು ಕಾರ್ಯಕರ್ತರ ಪರಿಶ್ರಮ ಅಪಾರವಾಗಿದೆ ಎಂದು ಬಿಜೆಪಿ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ಮಾತನಾಡಿದರು.

ಅವರು ಬುಧವಾರ ನಗರದ ಬಿಜೆಪಿ ಕಛೇರಿಯಲ್ಲಿ ಆಯೋಜಿಸಲಾದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಬಿಜೆಪಿಯು ಎಲ್ಲ ವರ್ಗದವರ ಹಿತ ರಕ್ಷಣೆಗೆ ಬದ್ಧವಿದೆ.ಬಡವರು,ಕಾರ್ಮಿಕರು,ರೈತರು ಹಾಗೂ ಮಹಿಳೆಯರ ಸರ್ವಾಂಗೀಣ ಅಭಿವೃದ್ಧಿಗೆ ಕಟಿಬದ್ಧವಿದೆ.ಈ ದಿಸೆಯಲ್ಲಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದ ನರೇಂದ್ರ ಮೋದಿ ಅವರು ಸವಾಂಗೀಣ ವಿಕಾಸಕ್ಕಾಗಿ ಶ್ರಮಿಸುತ್ತಿದ್ದಾರೆ.ಇಡೀ ವಿಶ್ವವೇ ಭಾರತದತ್ತ ಕಾತುರದಿಂದ ನೋಡುತ್ತಿದೆ.ಇದಕ್ಕೆ ಮೋದಿಯವರ ಸಮರ್ಥ ಆಡಳಿತ ಹಾಗೂ ದೂರದೃಷ್ಠಿಯ ನಾಯಕತ್ವವೇ ಕಾರಣವೆಂದು ಹೇಳಿದರು.

ಬಿಜೆಪಿ ಮುಖಂಡ ಕನಕಪ್ಪ ದಂಡಗುಲಕರ ಮಾತನಾಡಿ, ೧೯೭೭ರಲ್ಲಿ ಮುರಾರ್ಜಿ ದೇಸಾಯಿ ಸರ್ಕಾರ ಪತನವಾದ ನಂತರ ೧೯೮೦ರಲ್ಲಿ ದೀನ್ ದಯಾಳ ಉಪಧ್ಯಾಯ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಶ್ರಮದ ಫಲವಾಗಿ ಭಾರತೀಯ ಪಕ್ಷ ಉದಯವಾಯಿತೆಂದು ಹೇಳಿದರು.

ಬೆಳ್ಳಿಗೆ ಬಿಜೆಪಿ ಸಂಸ್ಥಾಪನಾ ದಿನ ಪ್ರಯುಕ್ತ ಶ್ರೀ ರಾಮ ಚೌಕದಿಂದ ಪಕ್ಷದ ಕಾರ್ಯಲಯದ ವರೆಗೆ ಶೋಭಾಯಾತ್ರೆ ಮಾಡಲಾಯಿತು. ನಂತರ ಪಕ್ಷದ ಕಾರ್ಯಲಯದಲ್ಲಿ ಡಾ.ಶ್ಯಾಮ ಪ್ರಸಾದ ಮುಖರ್ಜಿ ,ಭಾರತ ಮಾತಾ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ರವರ ಭಾವಚಿತ್ರಕ್ಕೆ ಪೂಜೆ ನೇರವೆರಿಸಲಾಯಿತು. ನಂತರ ೧೦-೦೦ ಗಂಟೆಗೆ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜಿ ರವರು ಬಿಜೆಪಿ ಸಂಸ್ಥಾಪನಾ ದಿನ ಪ್ರಯುಕ್ತ ಭಾ?ಣ ಮಾಡಿದ್ದನು ಪಕ್ಷದ ಕಾರ್ಯಲಯದಲ್ಲಿ ಪ್ರೋಜೆಕ್ಟರ ಮುಖಾಂತರ ವಿಕ್ಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಸದಿಗಳಾದ ಸಿದ್ರಾಮ ಕುಸಾಳೆ,ಸದಾನಂದ ಕುಂಬಾರ,ಶಶಿಕಲಾ ಸಜ್ಜನ,ಭೀಮರಾವ ಸಾಳೂಂಕೆ,ಅಪ್ಪರಾವ ನಾಗಶೆಟ್ಟಿ,ಮಹಾದೇವ ಗೊಬ್ಬೂರಕರ, ರಾಮು ಕುಸಾಳೆ,ಸಂಜಯ ವಿಟಕರ,ಯಲ್ಲಪ್ಪ ದಂಡಗುಲಕರ,ದತ್ತು ಘಂಟಿ,ಮೋಹನ ಗಂಟ್ಲಿ,ಬಸವರಾಜ ಹುಗ್ಗಿ,ಸಂದೀಪ ಹದನೂರ,ತಿಮ್ಮಣ್ಣ ಕುರ್ಡೇಕರ,ಶಿವಾಜಿ ರೆಡ್ಡಿ,ಯಲ್ಲಪ್ಪ ಜಾಲಹಳ್ಳಿ,ರವಿ ಬೆಳಮಗಿ,ರಾಖೇಶ ಮಿಸ್ರಾ,ಶ್ರೀನಿವಾಸ ನೇದಲಗಿ,ಮಹೇಶ ಮಲಕೂಡ,ಮಹಾದೇವ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here