ಕಲಬುರಗಿ: ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯಗಳನ್ನು ಕ್ರಮ ಕೈಗೊಳ್ಳಬೇಕೆಂದು ಸ್ಲಂ ಜನಾದೋಲನ-ಕರ್ನಾಟಕ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಸ್ಲಂ ಮುಖಂಡರಾದ ಬ್ರಹ್ಮಾನಂದ ಮಿಂಚಾ, ಶಾಮರಾವ ಶಿಂಧೆ, ಯಮನಪ್ಪ ಪ್ರಸಾದ್, ಗಣೇಶ ಕಾಂಬಳೆ, ಪಂಡಿತ ಬೈರಾಮಡಗಿ, ಬಸವರಾಜ ಧಾಡಿ, ಸಿದ್ದಾರಾಮ ತಿರ್ಮಾನ್, ಶೇಖರ ಸಿಂಗ್, ಕಿರಣ ರಾಠೋಡ, ಕರಣ ಬಂದರವಾಡ, ಶಿವಕುಮಾರ ಚಿಂಚೋಳಿ ಇದ್ದರು.