ಬೀದಿಬದಿ ವ್ಯಾಪಾರಿಗಳಿಂದ ೩೫ ಅಡಿ ಎತ್ತರದ ಡಾ.ಬಾಬು ಜಗಜೀವನರಾಂ ಕಟೌಟ್

0
10

ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ, ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರ ೧೧೫ನೇ ಜಯಂತೋತ್ಸವದ ಪ್ರಯುಕ್ತ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ವತಿಯಿಂದ ೩೫ ಅಡಿ ಎತ್ತರ ಹಾಗೂ ೮ ಅಡಿ ಅಗಲದ ಬೃಹತ ಭಾವಚಿತ್ರದ ಕಟೌಟ್ ಸ್ಥಾಪಿಸಿ, ಪೂಜೆ ಮತ್ತು ಪುಷ್ಪ ನಮನ ಸಲ್ಲಿಸುವ ಮೂಲಕ ಜಯಂತಿಯನ್ನು ಆಚರಿಸಲಾಯಿತು.

ಸಾರ್ವಜನಿಕ ಉದ್ಯಾಯನವನದ ಟೌನ್ ಹಾಲ್ ಬಳಿಯ ಡಾ.ಬಾಬು ಜಗಜೀವನರಾಂ ಪ್ರತಿಮೆ ಹತ್ತಿರ ಸ್ಥಾಪಿಸಲಾದ ಡಾ.ಬಾಬುಜೀ ಅವರ ಬೃಹತ ಕಟೌಟ್ ಗೆ ಅತಿಥಿಗಣ್ಯಮಾನ್ಯರು ಕ್ರೇನ್ ಮೂಲಕ ಪುಷ್ಪ ಅರ್ಚನೆ ನೆರವೇರಿಸಿ ಡಾ.ಬಾಬು ಜಗಜೀವನರಾಂ ಅವರಿಗೆ ನಮನ ಸಲ್ಲಿಸಿದರು.

Contact Your\'s Advertisement; 9902492681

ಕಾರ್ಯಕ್ರಮದ ಆಯೋಜಕರಾದ ಅಖಿಲ ಕರ್ನಾಟಕ ಬೀದಿಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಎಸ್.ಸೂರ್ಯವಂಶಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ನೆಲೋಗಿ, ಮಾಜಿ ಸಚಿವರು ಮತ್ತು ಶಾಸಕರಾದ ಪ್ರೀಯಾಂಕ ಖರ್ಗೆ, ಶಾಸಕರಾದ ಬಸವರಾಜ ಮತ್ತಿಮಡು, ಜೈಕನ್ನಡಿಗರ ಸೇನೆ ಅಧ್ಯಕ್ಷ ದತ್ತು ಭಾಸಗಿ, ಧರಂರಾಜ, ವಿನಯಕುಮಾರ, ರಾಜು ಕಟ್ಟಿಮನಿ, ರಾಮಾ ಪೂಜಾರಿ, ಡಾ. ವೇದಮೂರ್ತಿ, ವೆಂಕಟೇಶ ಕಾಂಬಳೆ, ರಾಘವೇಂದ್ರ ಕುಲಕರ್ಣಿ, ಮನೋಹರ ಬಿದನೂರ, ಬಾಬು ಶೇಖ ಪರೀಟ ಸೇರಿದಂತೆ ಹಲವರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here