ಶಾಂತಿ-ನೆಮ್ಮದಿಯಿಂದ ಜೀವನ ನಡೆಸಲು ಪುರಾಣ ಪ್ರವನಗಳು ಕೇಳುವುದು ಅವಶ್ಯ

0
109

ಶಹಾಬಾದ: ಇಂದಿನ ವೈಜ್ಞಾನಿಕ ಯುಗದಲ್ಲಿ ಅನೇಕ ಒತ್ತಡಗಳಿಂದ ಮನುಷ್ಯ ದುಶ್ಚಟಗಳ ದಾಸನಾಗುತ್ತಿದ್ದು, ಅದರಿಂದ ಹೊರಬಂದು ಶಾಂತಿ, ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಪುರಾಣ ಪ್ರವನಗಳು ಕೇಳುವುದು ಅವಶ್ಯ ಎಂದು ತೊನಸಿನಹಳ್ಳಿ(ಎಸ್) ಗ್ರಾಮದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಹೇಳಿದರು.

ಅವರು ಶನಿವಾರ ಸಮೀಪದ ತೊನಸಿನಹಳ್ಳಿ(ಎಸ್) ಗ್ರಾಮದ ಸಂಗಮೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರ ೧೫ನೇ ಪಟ್ಟಾಧಿಕಾರದ ಮಹೋತ್ಸವದ ಅಂಗವಾಗಿ ಆಯೋಜಿಸಲಾದ ಶರಣಬಸವೇಶ್ವರ ಪುರಾಣ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ: ಗುಡುಗು, ಗಾಳಿ, ಆಣೆಕಲ್ಲು ಸಹಿತ ಮಳೆ

ದುಶ್ಚಟಗಳು ಮನುಷ್ಯನ ಚಿಂತನೆ ಮಾಡುವ ಶಕ್ತಿಯನ್ನು ಕುಂದಿಸುತ್ತದೆ. ತಾನು ಹಾಳಾಗುವುದಲ್ಲದೇ ಸಮಾಜಕ್ಕೂ ಕಂಟಕನಾಗಿ ಹೊರಹೊಮ್ಮುತ್ತಾನೆ. ಧಾರ್ಮಿಕ ಆಚರಣೆಗಳು ಮನುಷ್ಯರಲ್ಲಿ ಮಹತ್ತರವಾದ ಬದಲಾವಣೆ ತರುವುದರ ಜೊತೆಗೆ ಸದ್ಗುಣ,ಸನ್ನಡತೆಯನ್ನು ಬೆಳೆಸುತ್ತವೆ. ಅಲ್ಲದೇ ಮಾನಸಿಕ ನೆಮ್ಮದಿ ನೀಡುತ್ತವೆ.ಇದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ ಎಂದು ಹೇಳಿದರು.

ಕುಳೆಗುಮಟಗಿಯ ಗುರುಸ್ವಾಮಿ ಶರಣರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ಸಾಮಾಜಿ ಸಮಸ್ಯೆಗೆ ಆಧ್ಯಾತ್ಮಿಕ ಬಡತನವೇ ಕಾರಣವಾಗಿದೆ.ಮಠ-ಮಂದಿರಗಳಲ್ಲಿ ನಡೆಯುವ ಪುರಾಣ-ಪ್ರವಚನಗಳಿಂದ ನಮ್ಮಲ್ಲಿ ಆಧ್ಯಾತ್ಮಿಕ ಸಂಪತ್ತನ್ನು ವೃದ್ಧಿಸಿ ನೈತಿಕ ಪ್ರಜ್ಞೆ, ಸಾಮಾಜಿಕ ಮೌಲ್ಯ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾದುದು.ಸಾರ್ಥಕ ಜವನಕ್ಕೆ ಆಧ್ಯಾತ್ಮಿಕ ಜ್ಞಾನ ಅಗತ್ಯವಾಗಿಬೇಕಾಗಿದೆ.ಇದು ಮಾನವನ ಜೀವನಕ್ಕೆ ಆಧಾರ ಸ್ತಂಭವಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಚನ ಜಾತ್ರೆ-೨೦೨೨ ರಲ್ಲಿ ವಿವಿಧ ಸಾಧಕರಿಗೆ ಗೌರವ ಸನ್ಮಾನ

ಯರಗೋಳ ಶ್ರೀಗಳು, ಕೊಟ್ಟೂರೇಶ್ವರ ಶ್ರೀಗಳು, ಮಡಿವಾಳಯ್ಯ ಶಾಸ್ತ್ರಿಗಳು ಜೆರಟಗಿ, ಮಲ್ಲಿಕಾರ್ಜುನ ಗೋಳೇದ್,ನಿಂಗಣ್ಣಗೌಡ ಮಾಲಿಪಾಟೀಲ್,ಅಯ್ಯಣ್ಣ ಬಂದಳ್ಳಿ, ಬಸವರಾಜ ಭಮ್ಮಶೆಟ್ಟಿ, ಅಭಿಷೇಕಪಾಟೀಲ, ಮಲ್ಲು ಗೊಳೇದ್,ಶ್ರೀಶೈಲ್ ರಾಮಶೆಟ್ಟಿ, ಶಿವಲಿಂಗಪ್ಪ ಗೊಳೇದ್, ಬೆಳ್ಳಪ್ಪ ಭಂಡಾರಿ, ಸಂಗಮೇಶ ರಾಮಶೆಟ್ಟಿ, ವಿರೇಶ ರಾಮಶೆಟ್ಟಿ, ಬಸವರಾಜ ಮದ್ರಿಕಿ ಸೇರಿದಂತೆ ಮಹಿಳೆಯರು ಇದ್ದರು.

ಇದನ್ನೂ ಓದಿ: ಯಾತ್ರೆಯ ಬಳಿಕ ಚುನಾವಣೆ ಅಭ್ಯರ್ಥಿಯ ಘೋಷಣೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here