ಕಲಬುರಗಿ: ನಗರದ ಕವಿಪ್ರನಿ ನೌಕರರ ಸಭಾಭವನದಲ್ಲಿ ಕರ್ನಾಟಕ ವಿದ್ಯಚ್ಛಕ್ತಿ ಮಂಡಳಿ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆ, ಜೆಸ್ಕಾಂ ವತಿಯಿಂದ ಬುದ್ಧ, ಬಸವ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತ್ಯೋತ್ಸವ ಕಾರ್ಯಕ್ರಮಕ್ಕೆ ಜೇಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಹುಲ ಪಾಂಡ್ವೆ ಅವರು ಉದ್ಘಾಟಿಸಿದರು.
ಸಂದರ್ಭದಲ್ಲಿ ಪುಜ್ಯ ವರಜ್ಯೋತಿ ಥೇರಾ ಭಂತೆಜಿ, ಡಾ.ಶಿವಾನಂದ ಮಹಾಸ್ವಾಮೀಜಿ, ಜೆಸ್ಕಾಂ ನಿರ್ದೇಶಕ ಬಿ.ಆರ್.ಸೋಮಶೇಖರ, ಕವಿಮಂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆಯ ಅಧ್ಯಕ್ಷ ಸಾಯಬಣ್ಣ ಕಾಳೆ, ಡಾ.ಶಾಂತಾ ಅಷ್ಠಗಿ, ಪೂಜ್ಯ ಶ್ರೀ ಡಾ.ಬೆಲ್ದಾಳ ಶರಣರು, ಡಾ.ದತ್ತಾತ್ರಯ ಇಕ್ಕಳಕಿ, ಡಾ.ಶ್ರೀದೇವಿ ಮದನಕರ್, ಅಂಬಾರಾಯ ಅಷ್ಠಗಿ, ಎಸ್.ಬಿ.ಪವನಂದಿ, ಕವಿಮಂ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಸಂಸ್ಥೆಯ ಉಪಾಧ್ಯಕ್ಷ ಬಿ.ಆರ್.ಬುದ್ಧಾ, ಕವಿಮಂ ಇಂಜಿನಿಯರಗಳ ಸಂಘದ ಉಪಾಧ್ಯಕ್ಷ ರಾಜೇಶ ಹಿಪ್ಪರಗಿ, ಕ.ವಿ.ಪ್ರ.ನಿ.ನಿ. ಡಿಪ್ಲೋಮಾ ಇಂಜಿನಿಯರಗಳ ಸಂಘದ ಉಪಾಧ್ಯಕ್ಷ ಮನೋಹರ ವಾಘ್ಮೋರೆ ಕವಿಪ್ರನಿನಿ, ಗುವಿಸಕಂನಿ ಜೆಸ್ಕಾಂ ಕೇಂಧ್ರ ಸಮಿತಿ ಮುಸ್ಲಿಂ ನೌಕರರ ಸಂಘದ ಉಪಾಧ್ಯಕ್ಷ ಮಹ್ಮದ ಮೀನಾಜೋದ್ದನ್, ಕಾರ್ಯಕಾರಿ ಸಮಿತಿ ಸದಸ್ಯರಾದ ನಿಂಗಪ್ಪ ಸೋನ್ನದ, ಶಿವಾನಂದ ತೋಳೆ, ಶಿವರಾಮ ಪವಾರ, ರಕ್ತದಾನಿಗಳಾದ ರವಿನಾಯ್ಕ, ಸಾಹೇಬಗೌಡ ಪಾಟಿಲ, ಶಂಕರ ಕಣ್ಣಿ, ಅಶೋಕ ಚವ್ಹಾಣ ಹಾಗೂ ಇತರರು ಇದ್ದರು.