ಕಲಬುರಗಿ: ಜಿಲ್ಲೆಯಲ್ಲಿ ದಿನೇ ದಿನೇ ಕಾರ್ಮಿಕರ ಸಾವುಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜುಲೈ 10 ರಿಂದ 10 ವರೆಗೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಉಚಿತ ಕಾರ್ಮಿಕರ ಕಾರ್ಡ್ ಮಾಡಿಸಿಕೊಡಲಾಗುವುದೆಂದು ಸಂಘದ ಅಧ್ಯಕ್ಷರಾದ ಭೀಮರಾವ್ ಎಂ ಕಂದಳ್ಳಿ ಕಾರ್ಮಿಕರು ಇದರ ಸದುಪಯೋಗ ಮಾಡಿಕೊಳ್ಳಬೇಕೆಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.
ಭಾನವಾರ ನಗರದ SVP ವೃತ್ತ PDA ಇಂಜಿನಿಯರಿಂಗ್ ಕಾಲೇಜು ರಸ್ತೆಯಲ್ಲಿರುವ ತನ್ನ ಸಂಘದ ಕಚೇರಿಯಲ್ಲಿ ಕರೆಯಲಾದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯ ಹಲವು ಕಾರ್ಮಿಕರಿಗೆ ಕಾರ್ಮಿಕರ ಕಾರ್ಡ್ ಗಳ ಬಗ್ಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲ ಬದುಕು ಅತಂತ್ರವಾಗಿದೆ. ಕಾರ್ಮಿಕರ ಭದ್ರತೆಗಾಗಿ ಜಾರಿಗೆ ತರಲಾಗಿರವು ಯೋಜನೆಗಳು ಸಂಕಷ್ಟಕ್ಕೆ ಸಿಲುಕಿದ ಕಾರ್ಮಿಕರಿಗೆ ಮತ್ತು ಅವರ ಕುಟುಂಬಕ್ಕೆ ಸಿಗುತ್ತಿಲ್ಲ.
ಇದರ ಪರಿಣಾಮವಾಗಿ ಈ ತಿಂಗಳ ಐದು ದಿನಗಳ ನಡುವೆ ಇಬ್ಬರು ಕಾರ್ಮಿಕರು ಸಾವನಪ್ಪಿದ್ದಾರೆ. ಕಾರ್ಮಿಕರಿಗೆ ಎಲ್ಲಾ ವರ್ಗದ ಕಾರ್ಮಿಕರು ತಾವು ಮಾಡುತ್ತಿರುವ ಕೆಲಸದ ಮಾಲಿಕರು ಅಥವಾ ಇಂಜಿನಿಯರಗಳಿಗೆ ಸುರಕ್ಷ ಸಾಮಾಗ್ರಿ ಒದಗಿಸಬೇಕೆಂದು ಕೇಳಬೇಕೆಂದು ಮನವಿ ಮಾಡಬೇಕು ಭೀಮರಾವ್ ಎಂ ಕಂದಳ್ಳಿ ಸಲಹೆ ನೀಡಿದರು.
ಬರುವ 01/07/2022 ರಿಂದ 10ವರೆಗೆ ಎಲ್ಲಾ ಕಟ್ಟಡ ಕಾರ್ಮಿಕರಿಗೆ ಉಚಿತ ಲೇಬರ್ ಕಾರ್ಡ್ ( ಕಾರ್ಮಿಕ ಕಾರ್ಡ್ ) ಮಾಡಿಸಿಕೊಡಲಾಗುತ್ತಿದ್ದು, ಎಲ್ಲಾ ಕಟ್ಟಡ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಲ್ಯಾಣ ಕರ್ನಾಟಕ ಜನತೆಗೆ ನವ ಕಲ್ಯಾಣ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಭೀಮರಾವ್ ಎಂ ಕೆ ಮನವಿ ಮಾಡಿದ್ದಾರೆ.
ಸಭೆಯಲ್ಲಿ ಉಪಾಧ್ಯಕ್ಷ ಶಿವಕುಮಾರ್ ಬೆಳಗೆರೆ, ಕಾರ್ಯದರ್ಶಿ ಮರೆಪ್ಪ S R, ಸಂಘಟನೆಯ ಕಾರ್ಯದರ್ಶಿ ಚಂದ್ರಕಾಂತ T, ಸಹ ಕಾರ್ಯದರ್ಶಿ ಶರಣು A, ಖಜಾಂಚಿ ದೇವಿಂದ್ರ SB, ಶರಣು M, ಸುರೇಶ್, ಶ್ರೀಕಾಂತ್, ಸುರೇಶ್ T, ಭೀಮಾಶಂಕರ YB, ವಿಜಯಕುಮಾರ D, ರಾಜು, S ಕಟ್ಟೆಪ್ಪಾ ಅನೇಕರು ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8050833830 / 9036264372.