ಚಿತ್ತಾಪುರ:ಭಕ್ತರ ಭಕ್ತಿ ಉನ್ನತವಾಗಿ ಬೆಳಯಲಿ ಎಲ್ಲಾ ಭಕ್ತರಿಗೂ ಶೆಯಸ್ಸು ಸಿಗಲಿ ಎಂದು ದಿಗ್ಗಾಂವ ಪಂಚಗೃಹ ಹಿರೇಮಠದ ಪೀಠಾಧಿಪತಿ ಷ. ಬ್ರ.ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಪಟ್ಟಣದ ಕಡಬೂರ ಗಲ್ಲಿಯ ಸಿದ್ದೇಶ್ವರ ಪೆದ್ದು ಮಠದಲ್ಲಿ ಕಡ್ಲಿಗಾರ ಹುಣ್ಣಿಮೆಯ ಪ್ರಯುಕ್ತ ಬುಧವಾರ ನಡೆದ ಗುರುವಂದನಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಭಕರು ಗುರುವಿಗೆ ವಿಶೇಷ ಸ್ಥಾನ ನೀಡಿರುತ್ತಾರೆ.ಭಕ್ತರ ಇಷ್ಟಾರ್ಥಗಳು ಈಡೇರಲಿ ಎಂದು ಗುರುಗಳು ಆಶೀರ್ವಾದ ಮಾಡುತ್ತಾರೆ.ಭಕ್ತಿ ತೋರಿಕೆಗಾಗಿ ಇರಬಾರದು ಗುರಿ ಸಾಧಿಸಲು ಗುರುವಿನ ಮಾರ್ಗದರ್ಶನ ಮುಖ್ಯವಾಗಿರುತ್ತದೆ ಸಕಲ ಭಕ್ತರ ಬಳಿತನ್ನ ಗುರುವಿನ ಸ್ಥಾನದಲ್ಲಿ ಇರುವರು ಬಯಸಬೇಕು.ಒಳ್ಳೆಯದು ಮಾಡುವುದೇ ಸ್ವರ್ಗ,ಕೆಟ್ಟದು ಮಾಡುವುದು ನರಕಕ್ಕೆ ಸಮಾನ ಇದನ್ನು ಅರಿತು ಸಕಲ ಜೀವಿಗಳ ಒಳಿತನ್ನು ಬಯಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಆನಂದ ಪಾಟೀಲ್,ನರಿಬೊಳ, ಕೋಟೇಶ್ವರ ರೇಷ್ಮೀ,ವಿಶ್ವನಾಥ ಜಗನ್ನಾಥ್, ವಿಜಯಲಕ್ಷ್ಮಿ ತಾಡತೆಗನೂರ,ನಾಗಮ್ಮ ರೇಷ್ಮೀ,ಬಸವರಾಜ ಪಾಟೀಲ್,ಅಲ್ಲೂರ್,ರೇವಣಸಿದ್ದಪ್ಪ ದುಖಾನ್,ಬಸವರಾಜಗೌಡ ಹೊನ್ನಾಳ,ಮಲ್ಲಿಕಾರ್ಜುನ ಯಡ್ಡಳ್ಳಿ, ಮಲ್ಲಿಕಾರ್ಜುನ ಪೂಜಾರಿ,ಬಸವರಾಜ ಹೂಗಾರ, ಶಾಂತಾ ತಾಡತೆಗನೂರ,ಚಂದ್ರಶೇಖರ್ ಪಾಟೀಲ್,ಹಂಗನಹಳ್ಳಿ,ಗಂಗಾಧರ್ ಪಾಟೀಲ್,ಶರಣಬಸಪ್ಪಾ ಸಾತನೂರ್,ಅನಂತರೆಡ್ಡಿ ಯಾದಗಿರಿ,ರಾಜಶೇಖರ್ ದೇಶಮುಖ ಸೇರಿದಂತೆ ಅನೇಕರು ಇದ್ದರು.
ಶ್ರೀಲೇಖಾ ತಾಡತೆಗನೂರ ಹಾಗೂ ಶಿವಗಂಗಾ ಬೈರಿ ಸಂಗೀತ ಸೇವೆಯನ್ನು ನೀಡಿದರು. ಅಂಬರೀಷ್ ಸುಲೇಗಾಂವ್ ಸ್ವಾಗತಿಸಿದರು.ಮಠದ ವಕ್ತಾರ ಶರಣು ಉಡಗಿ ನಿರೂಪಿಸಿ ವಂದಿಸಿದರು.