ಕಲಬುರಗಿ: ವಾರ್ಡ್ ನಂ ೫೧, ೫೨ ರಲ್ಲಿ ಮಾಜಿ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಪ್ರತಿಪಕ್ಷದ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಜನ್ಮದಿನದ ಅಂಗವಾಗಿ ಕಾಂಗ್ರೆಸ್ ಹಿಂದುಳಿದ ದಕ್ಷಿಣ ಅಧ್ಯಕ್ಷ ಧರ್ಮರಾಜ ಬಿ. ಹೇರೂರ ಹಾಗೂ ಕಾಂಗ್ರೆಸ್ ಮುಖಂಡ ವೇಕಂಟ ರೆಡ್ಡಿ ರಾಗಪೂರ್ ಅವರ ನೇತೃತ್ವದಲ್ಲಿ ಸಸಿ ನೆಡುವ ಹಾಗೂ ಪೌರಕಾರ್ಮಿಕರಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಳಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಜಗದೇವ ಗುತೇದಾರ, ಕಾಂಗ್ರೆಸ್ ಮುಖಂಡರಾದ ರಾಜಗೋಪಾಲ್ ರಡ್ಡಿ, ಸಂತೋಷ ಬೀಲಗುಂದಿ, ಸಂದೇಶ ಕಮಕನೂರ, ಲಿಂಗರಾಜ ಕಣಿ, ಲಿಂಗರಾಜ ತಾರಫೈಲ್, ಶರಣಗೌಡ ಪಾಟೀಲ, ಕೃಷ್ಣ ಸಿಂಧೆ, ನಾಗರಾಜ ಕಂಬಳ್ಳೆ, ಗಿರೀಶ ಬೋರೆ, ರಾಜೇಶ ಸೋಪ್ಪಣ್ಣ, ಸೋಮಣ್ಣ ಗೌಡ್ರು, ರಮೇಶ ಚೌವ್ಹಾಣ, ವೈಜನಾಥ ಮಾಲಿಪಾಟೀಲ, ಮಹೇಂದ್ರ ಕೋಳ್ಳೂರ, ಪ್ರತಾಪ ಇಟ್ಟಗಾ, ಅರುಣ ರೆಡ್ಡಿ, ವಿರಯ್ಯಾ ಗುತ್ತೇದಾರ, ಕಿಶೋರ ಕಟ್ಟಿ ಇದ್ದರು.