ಬಿಜೆಪಿ ಸರಕಾರದ ವಿರುದ್ಧ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪ್ರತಿಭಟನೆ

0
75

ಬಾಗಲಕೋಟೆ : ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಜಿಲ್ಲಾ ಅಧ್ಯಕ್ಷರಾದ ಎಸ್ ಜಿ ನಂಜಯ್ಯನಮಠ ಇವರ ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರಿಗೆ ದುರುದ್ದೇಶ ಪೂರ್ವಕಾಗಿ ಬಿಜೆಪಿ ಸರ್ಕಾರದಿಂದ ಇ.ಡಿ ದುರ್ಬಳಕೆ ಮಾಡಿ ಕಿರುಕುಳ ನೀಡುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಚ್ ವೈ ಮೇಟಿ ಮಾತನಾಡಿ ಈಗಿನ ಕೇಂದ್ರದ ಬಿಜೆಪಿ ಸರ್ಕಾರವು ಉದ್ದೇಶಪೂರ್ವಕವಾಗಿ ಗಾಂಧಿ ಪರಿವಾರದ ಷಡ್ಯಂತರವನ್ನು ರಚಿಸಿ ಗಾಂಧಿ ಪರಿವಾರದ ಆತ್ಮ ಬಲವನ್ನು ಕುಗ್ಗಿಸುವಂತಹ ಕೆಲಸವನ್ನು ಬಿಜೆಪಿ ಸರ್ಕಾರವು ಇ. ಡಿ ಬಳಸಿಕೊಂಡು ಕಾಂಗ್ರೆಸ್ ಪಕ್ಷದ ಆತ್ಮ ಬಲವನ್ನು ಕುಗ್ಗಿಸುವ ಹಾಗೂ ದೇಶವನ್ನು ಕಟ್ಟಿದ ಕಾಂಗ್ರೆಸ್ ಪಕ್ಷದ ತೇಜೋವಧೆಗೆ ಬಿಜೆಪಿ ಸರ್ಕಾರವು ಪ್ರಯತ್ನಿಸುತಿದೆ ಎಂದು ಹೇಳಿದರು.

Contact Your\'s Advertisement; 9902492681

ಈ ಪ್ರತಿಭಟನೆಯಲ್ಲಿ ಭಾಗಿಯಾದ , ಮಾಜಿ ಸಚಿವ ಶಿವಾನಂದ ಪಾಟೀಲ,ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ,ಮಾಜಿ ಸಚಿವ ಅಜಯ ಕುಮಾರ ಸರನಾಯಕ ಮಾಜಿ ಶಾಸಕ ಜೆ ಟಿ ಪಾಟೀಲ, ನಿಂಗನಗೌಡ ಪಾಟೀಲ, ಸತೀಶ ಬಂಡಿವಡ್ಡ, ರಾಜು ಮನಿಕೇರಿ ಪೀರಪ್ಪ ಮ್ಯಾಗೇರಿ ,ರಫೀಕಸಾಬ ಬಾರಿ ಗಡ್ಡಿ ಮುನ್ನಾ ಸತಾರ್ಕರ ಶಬ್ಬೀರ ನದಾಫ,ಎಮ ಎಚ ಚಲವಾದಿ , ಆನಂದ ಶಿಲ್ಪಿ, ಅಬ್ದುಲ ರಜಾಕ ಬೆನೂರ, ಎಸ್ ಎನ್ ರಾಂಪುರ,ಸುನಿಲ ಕೊಡಬಾಗಿ ಮಲ್ಲು ಲಮಾಣಿ, ವಿಜಯಕುಮಾರ ನಾಯಕ್, ಹನುಮಂತ ರಾಕುಂಪಿ, ಶಶಿಕಾಂತ್ ಪೂಜಾರಿ, ಬಸ್ಸು ರಾಜ ಹೂವಿನಹಳ್ಳಿ, ರಸುಲ ಮುಜಾರ, ಶರೀಫ್ ಮುಲ್ಲಾ, ಸಂತೋಷ ಬಗಲಿದೇಸಾಯಿ, ಗಿರೀಶ್ ಅಂಕಲಗಿ, , ಶಶಿಕಾಂತ್ ಪೂಜೇರಿ, ರಾಹುಲ್ ಕಲುತಿ, ಬಾಬು ಇಟಗಿ, ಸಾಧಿಕ ಸೈಯದ ಅಲಿ, ಅಭಿಷೇಕ ತಳ್ಳಿಕೆರಿ, ಹನುಮಂತ ಭಜಂತ್ರಿ ಇನ್ನು ಮುಖಂಡರು ವಿವಿಧ ಘಟಕಗಳ ಅಧ್ಯಕ್ಷರರು ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here