ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕಕ್ಕೆ ನೇಮಕ

0
19

ಸುರಪುರ: ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕಕ್ಕೆ ಸುರಪುರ ವಿಧಾನಸಭಾ ಕ್ಷೇತ್ರದ ವಿವಿಧ ಮುಖಂಡರನ್ನು ನೇಮಕಗೊಳಿಸಲಾಗಿದ್ದು,ಮಾಜಿ ಶಾಸಕ ರಾಜಾ ವೆಂಟಕ್ಪಪ ನಾಯಕ ಅವರ ಶಿಫಾರಸ್ಸಿನ ಮೇಲೆ ನೇಮಕಗೊಳಿಸಿ ಎಲ್ಲರಿಗೂ ನೇಮಕ ಆದೇಶ ಪತ್ರವನ್ನು ವಿತರಿಸಿದರು.

ನಗರದ ರಾಜಾ ವೆಂಕಟಪ್ಪ ನಾಯಕ ಅವರ ಗೃಹ ಕಚೇರಿ ಆವರಣದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಉಪಾಧ್ಯಕ್ಷರನ್ನಾಗಿ ಬೈಲಪ್ಪಗೌಡ ಸಣ್ಣ ಬಸನಗೌಡ ವಾಗಣಗೇರಿಯವರನ್ನು ಶಾಂತಿಲಾಲ ಸಕ್ರಪ್ಪ ಗೆದ್ದಲಮರಿ ತಾಂಡಾ ಅವರನ್ನು ನೇಮಕಗೊಳಿಸಲಾಯಿತು.ಅಲ್ಲದೆ ಜಿಲ್ಲಾ ಪ್ರಧಾನ ಕಾರ್ಯದರ್ಶಿಯನ್ನಾಗಿ ಈರಣ್ಣ ಮಲ್ಲಿಕಾರ್ಜುನರಡ್ಡಿ ಮುದನೂರ ಅವರನ್ನು ನೇಮಕಗೊಳಿಸಿ ನೇಮಕ ಆದೇಶ ಪತ್ರವನ್ನು ವಿತರಿಸಲಾಯಿತು.

Contact Your\'s Advertisement; 9902492681

ಇದನ್ನೂ ಓದಿ: ಸುರಪುರ:ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ಈ ಸಂದರ್ಭದಲ್ಲಿ ರಾಜಾ ವೆಂಕಟಪ್ಪ ನಾಯಕ ಅವರು ಮಾತನಾಡಿ, ಇಂದು ಜಿಲ್ಲೆಯ ಕಿಸಾನ್ ಕಾಂಗ್ರೆಸ್ ಪದಾಧಿಕಾರಿಗಳಾಗಿ ನೇಮಕಗೊಂಡ ತಮ್ಮೆಲ್ಲರಿಗೂ ಅಭಿನಂಧನೆಗಳು,ತಾವೆಲ್ಲರು ಜಿಲ್ಲೆಯಲ್ಲಿನ ಎಲ್ಲಾ ಕಾಂಗ್ರೆಸ್ ಶಾಸಕರು,ಮಾಜಿ ಶಾಸಕರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಿಲ್ಲೆಯಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂಧಿಸುವ ಜೊತೆಗೆ ಪಕ್ಷ ಸಂಘಟನೆಗೆ ಹೆಚ್ಚೆಚ್ಚು ರೈತರನ್ನು ತೊಡಗಿಸಿಕೊಂಡು ಜಿಲ್ಲೆಯಾದ್ಯಂತ ಕಾಂಗ್ರೆಸ್ ಸಂಘಟನೆಗೆ ಶ್ರಮಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಬಿ.ಮಾಣಿಕರಡ್ಡಿ,ಈರಣ್ಣ ಚೌದ್ರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.

ಇದನ್ನೂ ಓದಿ: ಬೀದರ ಲೋಕಸಭಾ ಕ್ಷೇತ್ರಕ್ಕೆ ಒಟ್ಟು 14 ಕೋಟಿ 65 ಲಕ್ಷ ಅನುದಾನ ಬಿಡುಗಡೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here