ನಾಳೆ ಶರಣಬಸವ ವಿವಿ 5ನೇ ಸಂಸ್ಥಾಪನಾ ದಿನ

0
33

ಕಲಬುರಗಿ: ಶರಣಬಸವ ವಿಶ್ವವಿದ್ಯಾಲಯದ ೫ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಇಂಧನ ಸಂರಕ್ಷಣೆ ಮತ್ತು ಇಂಧನದಕ್ಷತೆಯ ಕುರಿತು ಒಂದು ದಿನದರಾಷ್ಟ್ರೀಯ ಸಮ್ಮೇಳನವು ಜುಲೈ ೨೯ ರಂದು ಬೆಳಗ್ಗೆ ೧೧.೦೦ ಗಂಟೆಗೆ ವಿಶ್ವವಿದ್ಯಾಲಯದ ಮುಖ್ಯಆವರಣಲ್ಲಿರುವದೊಡ್ಡಪ್ಪಅಪ್ಪ ಸಭಾಂಗಣದಲ್ಲಿ ನಡೆಯಲಿದೆ.

ಮಹಾದಾಸೋಹ ಪೀಠಾಧಿಪತಿ ಹಾಗೂ ಶರಣಬಸವ ವಿವಿಯಕುಲಾಧಿಪತಿಡಾ. ಶರಣಬಸವಪ್ಪಅಪ್ಪಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ ೯ನೇ ಪೀಠಾಧಿಪತಿಚಿರಂಜೀವಿ ದೊಡ್ಡಪ್ಪಅಪ್ಪಾಜಿಅವರ ಸಾನಿಧ್ಯದಲ್ಲಿ ಈ ಎರಡೂ ಕಾರ್ಯಕ್ರಮಗಳು ನಡೆಯಲಿವೆ, ಈ ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖ ಉಪಸ್ಥಿತರಿರುವರು ಎಂದು ಶರಣಬಸವ ವಿಶ್ವವಿದ್ಯಾಲಯದ ಕುಲಸಚಿವಡಾ. ಅನಿಲಕುಮಾರ ಬಿಡವೆಗುರುವಾರ ತಿಳಿಸಿದ್ದಾರೆ.

Contact Your\'s Advertisement; 9902492681

ವಿವಿಯ ೫ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಈ ವ?ಜುಲೈ ೧೦ ರಂದು ನೇಪಾಳದ ಬೀರಗುಂಜ್‌ನಲ್ಲಿ ಬಸವ ಧರ್ಮ ಪೀಠದಅಂತರಾಷ್ಟ್ರೀಯ ಬಸವ ಸಮ್ಮೇಳನದಲ್ಲಿ ಮಾತೋಶ್ರೀ ಡಾ.ದಾಕ್ಷಾಯಿಣಿಅವ್ವಾಜಿಅವರ ಸೇವೆಯನ್ನು ಗುರುತಿಸಿ, ಪ್ರತಿ ವ? ನೀಡಲಾಗುವ “ಅಂತರರಾಷ್ಟ್ರೀಯದಾಸೋಹರತ್ನ ಪ್ರಶಸ್ತಿ” ಪುರಸ್ಕಾರ ಲಭಿಸಿದ್ದಕ್ಕಾಗಿ, ದಾಸೋಹ ಮಹಾಮನೆಯಲ್ಲಿ ಸಾಯಂಕಾಲ ಪ್ರತ್ಯೇಕ ಸಮಾರಂಭದಲ್ಲಿಡಾ. ಅವ್ವಾಜಿಯವರಿಗೆ ಸನ್ಮಾನಿಸಲಾಗುವುದುಎಂದು ತಿಳಿಸಿದ್ದಾರೆ.

೫ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಇಂಧನ ಸಂರಕ್ಷಣೆ ಮತ್ತುಇಂಧನದಕ್ಷತೆಕುರಿತುಒಂದು ದಿನದರಾಷ್ಟ್ರೀಯ ಸಮ್ಮೇಳನವನ್ನು ಜಂಟಿಯಾಗಿ ಹಮ್ಮಿಕೊಳ್ಳಲಾಗಿದ್ದು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಪಾಟೀಲ್ ಭುವನೇಶ್‌ದೇವಿದಾಸ್ ಹಾಗೂ ಕರ್ನಾಟಕ ನವೀಕರಿಸಬಹುದಾದಇಂಧನಅಭಿವೃದ್ಧಿ ಲಿಮಿಟೆಡ್ (ಕೆಆರ್‌ಇಡಿಎಲ್) ಅಧ್ಯಕ್ಷಚಂದ್ರಕಾಂತ ಬಿ. ಪಾಟೀಲ ಮುಖ್ಯ ಅಥಿತಿಗಳಾಗಿ ಆಗಮಿಸುವರು.ಉನ್ನತ ಶಿಕ್ಷಣ ಕೇಂದ್ರಗಳ ತಜ್ಞರುಇಂಧನದಕ್ಷತೆ ಮತ್ತುಇಂಧನ ಸಂರಕ್ಷಣೆಕುರಿತು ವಿಶೇ? ಉಪನ್ಯಾಸಗಳನ್ನು ನೀಡಲಿದ್ದಾರೆ. ಹಾಗೂ ಶರಣಬಸವ ವಿಶ್ವವಿದ್ಯಾಲಯದ ಉಪಕುಲಪತಿಡಾ. ನಿರಂಜನ್ ವಿ ನಿಷ್ಠಿ ಅಧ್ಯಕ್ಷತೆ ವಹಿಸಲಿದ್ದಾರೆಎಂದುಡಾ.ಬಿಡವೆತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮ ಕುಲಪತಿಡಾ. ವಿ. ಡಿ. ಮೈತ್ರಿ ಮತ್ತುಎನ್. ಎಸ್. ದೇವರಕಲ್, ಡೀನ್‌ಡಾ ಲಕ್ಷ್ಮೀ ಪಾಟೀಲ್ ಮಾಕಾ, ಕುಲಸಚಿವ (ಮೌಲ್ಯಮಾಪನ) ಶ್ರೀ ಬಸವರಾಜ ಮಠಪತಿ ಮತ್ತು ಹಣಕಾಸುಅಧಿಕಾರಿ ಪ್ರೊ.ಕಿರಣ ಮಾಕಾ ಸೇರಿದಂತೆಇತರ ಪ್ರಮುಖರು ಉಪಸ್ಥಿತರಿರುವರು.

ಇದೇ ಸಂದರ್ಭದಲ್ಲಿಆಯಾ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು.೨೦೨೧-೨೨ನೇ ಶೈಕ್ಷಣಿಕ ವ?ದಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದ ಅಧ್ಯಾಪಕರನ್ನುಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.ಮುಖ್ಯಕಾರ್ಯಕ್ರಮದ ಅಂಗವಾಗಿ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅವರ ಜನ್ಮದಿನಾಚರಣೆಯೂ ಅಂದು ನಡೆಯಲಿದೆಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here