ಜು.31ಕ್ಕೆ ರಾಷ್ಟ್ರೀಯ ಸಂಗೀತೋತ್ಸ ಪುರಸ್ಕಾರ ವಿತರಣೆ

0
93

ಕಲಬುರಗಿ: ಇಲ್ಲಿನ ವಚನ ಸಂಜೀವಿನಿ ಸಾಹಿತ್ಯ, ಸಾಂಸ್ಕೃತಿಕ ಕಲಾ ಸಂಸ್ಥೆಯ ವತಿಯಿಂದಖ್ಯಾತತಬಲಾ ವಾದಕ ದಿ. ಪಂ.ಭಗವಂತಪ್ಪ ಹೂಗಾರದೇಸಾಯಿಕಲ್ಲೂರಇವರ ೨ನೇ ಸ್ಮರಣಾರ್ಥ ಅಂಗವಾಗಿ ಜು.೩೧ರಂದು ರಾಷ್ಟ್ರೀಯ ಸಂಗೀತೋತ್ಸವ ಹಾಗೂ ರಾಷ್ಟ್ರೀಯ ಪುರಸ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಶಂಕರ ಬಿ. ಹೂಗಾರ ತಿಳಿಸಿದ್ದಾರೆ.

ನಗರದಎಸ್.ಎಂ.ಪಂಡಿತರಂಗಮಂದಿರದಲ್ಲಿ ಸಂಜೆ ೪ ಗಂಟೆಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಹಿಂದುಸ್ತಾನಿ ಗಾಯಕ ಪದ್ಮಶ್ರೀ ಎಂ.ವೆಂಕಟೇಶಕುಮಾರ, ಅಂತಾರಾಷ್ಟ್ರೀಯಕಲಾವಿದರಾದ ಮಾಸ್ಟರ್‌ಯಶ್ವವಂತ ವೈಷ್ಣವ, ಜಡೇಶ ಬಿ. ಹೂಗಾಶರ, ಸತೀಶ ಕೊಳ್ಳಿ ಆಗಮಿಸಲಿದ್ದಾರೆಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಮಾದನಹಿಪ್ಪರಗಿಯಅಭಿನವ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ದತ್ತಾತ್ರೇಯ ಪಾಟೀಲ ಉದ್ಘಾಟಿಸಲಿದ್ದಾರೆ.ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕ ಬಸವರಾಜ ಮತ್ತಿಮಡು, ಮಾಜಿ ಶಾಸಕ ಬಿ.ಆರ್.ಪಾಟೀಲ, ಗುಲ್ಬರ್ಗ ವಿವಿ ಕುಲಪತಿ ಪ್ರೊ.ದಯಾನಂದಅಗಸರ, ಆರ್.ಕೆ. ಪಾಟೀಲ, ಸಿದ್ಧರಾಮ ಪ್ಯಾಟಿ, ಕೆ.ಎಚ್.ಚೆನ್ನೂರ್, ಅಜೀಮ್ ಪಾಶಾ, ಮಹೇಶ ಹೂಗಾರ ಭಾಗವಹಿಸಲಿದ್ದಾರೆಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here