ದಿವ್ಯಾಂಗರಿಗೆ ಹಾಗೂ ಭಾರತೀಯ ಸೈನಿಕರಿಗೆ ಕಸಾಪ‌ ಉಚಿತ ಸದಸ್ಯತ್ವ

0
16

ಕಲಬುರಗಿ: ಇತ್ತೀಚೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹು ನಿರೀಕ್ಷಿತ ಕನ್ನಡ ಸಾಹಿತ್ಯ ಪರಿಷತ್ತಿನ ವಿನೂತನ‌ ತಂತ್ರಜ್ಞಾನವುಳ್ಳ ಮೊಬೈಲ್ ಆ್ಯಪ್ ಲೋಕಾರ್ಪಣೆ ಮಾಡಿದರು. ವಿಶೇಷವಾಗಿ ಭಾರತೀಯ ಸೈನಿಕರಿಗೆ/ಮಾಜಿ‌ ಸೈನಿಕರಿಗೆ ಹಾಗೂ ದಿವ್ಯಾಂಗಚೇತನರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಅವರು ಉಚಿತವಾಗಿ ಸದಸ್ಯತ್ವವನ್ನು ನೀಡುವುದರ ಮೂಲಕ ಕಸಾಪ ಜನಸಾಮಾನ್ಯರ ಪರಿಷತ್ತನ್ನಾಗಿಸಿದ್ದಾರೆ ಎಂದು ಡಿಸೆಬಲ್ಡ್ ಹೆಲ್ಪಲೈನ್ ಫೌಂಡೆಶನನ ರಾಜ್ಯ ಸಂಯೋಜಕ ಬಸವರಾಜ ಹೆಳವರ ಯಾಳಗಿ ಹರ್ಷ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ವಿಶೇಷಚೇತನರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯತ್ವದ ಅರ್ಜಿಯನ್ನು ಉಚಿತವಾಗಿ ಮೊಬೈಲ್‌ ಅಪ್ಲಿಕೇಶನನಲ್ಲಿ ಹಾಕುವುದರ ಮೂಲಕ ಕಸಾಪ ರಾಜ್ಯಾಧ್ಯಕ್ಷರ ಕೋಟಿ ಸದಸ್ಯತ್ವದ ಕನಸು ನನಸಾಗಿಸೋಣ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here