ಶಹಾಬಾದ: ಕೊರಮ ಸಮಾಜದ ಶರಣ ಶ್ರೀ ಕಾಯಕಯೋಗಿ ನೂಲಿಯ ಚಂದಯ್ಯನವರ ಜಯಂತಿಯನ್ನು ತಾಲೂಕಿನಲ್ಲಿ ವಿಜೃಂಭಣೆಯಿಂದ ಆಚರಿಸಲು ತಹಸೀಲ್ದಾರರು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಬುಧವಾರ ಶ್ರೀ ನೂಲಿಯ ಚಂದಯ್ಯ ಕೊರಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗ್ರೇಡ್-೨ ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಕಾಯಕಯೋಗಿ ನೂಲಿಯ ಚಂದಯ್ಯನವರ ಜಯಂತಿಯನ್ನು ಅಗಸ್ಟ ೧೨ ರಂದು ಆಚರಣೆ ಮಾಡಲು ಸರಕಾರ ಆದೇಶ ಮಾಡಿದೆ.ಆದ್ದರಿಂದ ತಾಲೂಕಿನ ಎಲ್ಲಾ ಸರಕಾರಿ ಕಚೇರಿಗಳ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ೧೨ನೇ ಶತಮಾನದ ಶರಣ ನೂಲಿಯ್ಯ ಚಂದಯ್ಯನವರ ಜಯಂತಿಯನ್ನು ಆಚರಿಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡಿದರು.
ಕೊರಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲೇಶಿ ಭಜಂತ್ರಿ, ಉಪಾಧ್ಯಕ್ಷ ರಾಮು ಭಜಂತ್ರಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ ಭಜಂತ್ರಿ. ಖಜಾಂಚಿ ಶಶಿಕುಮಾರ ಭಜಂತ್ರಿ, ಸಾಬಣ್ಣ ಭಜಂತ್ರಿ, ಅಶೋಕ ಭಜಂತ್ರಿ, ಲಕ್ಷ್ಮಿಕಾಂತ ಭಜಂತ್ರಿ, ಶಿವಕುಮಾರ ಭಜಂತ್ರಿ ಸೇರಿದಂತೆ ಅನೇಕರು ಇದ್ದರು.