ಪ್ರೌಢಶಾಲಾ ಶಿಕ್ಷಕರ ಸಂಘದ ಚುನಾವಣೆ: ನೂತನ ಸದಸ್ಯರಿಗೆ ಸನ್ಮಾನ

0
9

ಕಲಬುರಗಿ: ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲಬುರಗಿ ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಚುನಾವಣೆಯಲ್ಲಿ ಆಯ್ಕೆಯಾದ ಚಂದ್ರಕಾಂತ ತಳವಾರ, ರಾಜೇಂದ್ರ ಪ್ರಸಾದ್, ಮಲ್ಲಿಕಾರ್ಜುನ ಜಮಾದಾರ, ಗುರುಶಾಂತಪ್ಪ ಎಸ್ ನಾಟೀಕಾರ, ವಿಷ್ಣುತಿರ್ಥ, ಶರಣಬಸಪ್ಪ ನಾಟೀಕಾರ ಮತ್ತು ಕಲಬುರಗಿ ಜಿಲ್ಲಾ ಭಾರತದ ಸೇವಾದಳದ ಜಿಲ್ಲಾ ಸಂಚಾಲಕ ಚಂದ್ರಶೇಖರ ಜಮಾದಾರ, ಕಲಬುರಗಿ ಜಿಲ್ಲಾ ಭಾರತದ ಸೇವಾ ದಳದ ಸದಸ್ಯ ಶಿವಶರಣಪ್ಪ ಜಮಾದಾರ ಮತ್ತು ರಾಜಶೇಖರ ತಲಾರಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಲಬುರಗಿ ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಅಧ್ಯಕ್ಷ ಮರೇಪ್ಪಾ ಮಿಣಜಿಗಿ, ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿಯ ಕಾರ್ಯಾಧ್ಯಕ್ಷ ಸಾಯಬಣ್ಣ ವಡಗೇರಿ, ಕೆನರಾ ಬ್ಯಾಂಕ್‌ನ ಆನಂದ, ಜಿಲ್ಲಾ ಕೋಲಿ ಕಬ್ಬಲಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ನೀಲಕಂಠ ಎಂ.ಜಮಾದಾರ, ಧರ್ಮರಾಜ ಜವಳಿ, ದಾದಾಸಾಬ ಹೊಸೂರ, ಸಿದ್ದಪ್ಪಾ ಮಹಾಗಾಂವ, ರಾಜೇಂದ್ರ ಝಳಕಿ, ಅಶೋಕ ಸೋನ್ನ, ಅಮೃತ ಮಾಲಿಪಾಟೀಲ, ಶರಣು ಶಾಳೇರ, ಅಮಲ್ಲಪ್ಪಾ ಯರಗೋಳ, ಅಶೋಕ ಶಾಹಾಪೂರಕರ, ಅವ್ವಣ್ಣಾ ತಳವಾರ, ಅಮಿತ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here