ಸುರಪುರ: ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗ ದಳ ವತಿಯಿಂದ ನಗರದಲ್ಲಿ ಅಖಂಡ ಭಾರತ ಸಂಕಲ್ಪ ದಿವಸ್ ನಿಮಿತ್ತ ಪಂಜಿನ ಮೆರವಣಿಗೆ ನಡೆಯಿತು, ನಗರದ ಹಳೆ ಸರಕಾರಿ ಆಸ್ಪತ್ರೆಯ ಆವರಣದಿಂದ ಪ್ರಮುಖ ರಸ್ತೆಗಳ ಮೂಲಕ ವೇಣುಗೋಪಾಲಸ್ವಾಮಿ ದೇವಸ್ಥಾನವರೆಗೆ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು.
ವನವಾಸಿ ಯಾದಗಿರಿ ಜಿಲ್ಲಾ ಪ್ರಮುಖ ಮಣಿವಣ್ಣಜೀರವರು ಬೌದ್ಧಿಕ ನಡೆಸಿಕೊಟ್ಟರು ಸಂಕಲ್ಪ ದಿವಸ ಮಹತ್ವ ಕುರಿತು ಮಾಹಿತಿ ನೀಡಿದರು, ರುಕ್ಮಾಪುರ ಹಿರೇಮಠ ಸಂಸ್ಥಾನದ ಗುರುಶಾಂತಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಭಜರಂಗದಳ ತಾಲೂಕು ಸಂಯೋಜಕ ಸಚಿನ್ಕುಮಾರ ನಾಯಕ ಸ್ವಾಗತಿಸಿದರು ವಿಹಿಂಪ ಪರಿಷತ್ನ ಹಿರಿಯ ಕಾರ್ಯಕರ್ತರಾದ ಗುರುನಾಥರೆಡ್ಡಿ ಶೀಲವಂತ, ಮಂಜುನಾಥ, ಅಯ್ಯಣ್ಣ ಅಮ್ಮಾಪುರ, ಸುನೀಲ್, ಮೌನೇಶ ರಾಖಿ, ಗೋವಿಂದರಾಜ ತಡಕಲ್, ಜಟ್ಟೆಪ್ಪ, ಮೌನೇಶ ಕುಪಗಲ್, ಪ್ರವೀಣ,ಇತರರು ಪಾಲ್ಗೊಂಡಿದ್ದರು.