ಶಹಾಬಾದ:ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಸಂಕಷ್ಟದಲ್ಲಿ ಜನರಿಗೆ ಜೀವದಾನ ಮಾಡಬೇಕು. ರಕ್ತದಾನಕ್ಕಿಂತ ಶ್ರೇಷ್ಠದಾನ ಇನ್ನೊಂದಿಲ್ಲ ಎಂದು ಕಲ್ಬುರ್ಗಿಯ ವಿಭಾಗೀಯ ಸಹ ಸಂಚಾಲಕ ಅಂಬರೀಷ ಸುಲೆಗಾಂವ ಹೇಳಿದರು.
ಅವರು ನಗರದ ಜಗದಂಬಾ ಮಂದಿರದಲ್ಲಿ ಜೀವನ ಆಧಾರ ರಕ್ತನಿಧಿ ಘಟಕ, ವಿಶ್ವಹಿಂದು ಪರಿಷತ್ತ, ಭಜರಂಗ ದಳ ಸಂಯುಕ್ತಾಶ್ರದಲ್ಲಿ ಆಯೋಜಿಸಲಾದ ಉಚಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರಕ್ತದಾನ ಮಾಡುವ ಪ್ರತಿಯೊಬ್ಬರೂ ಒಂದು ಜೀವಕ್ಕೆ ಸಂಜೀವಿನಿ ಇದ್ದಂತೆ. ಇಂದಿನ ದಿನಗಳಲ್ಲಿ ಹೆಚ್ಚಾಗಿ ಯುವಕರು ರಕ್ತದಾನ ಅರಿವು ಮೂಡಿಸಿಕೊಂಡು ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಮುಂದಾಗಬೇಕೆಂದು ಮನವಿ ಮಾಡಿದರು.
ಭಾರತಮಾತೆ ಭಾವಚಿತ್ರಕ್ಕೆ ಕನಕ ಗುರುಪೀಠದ ಲಿಂಗಬಿರದೇವರು ಪೂಜೆ ಸಲ್ಲಿಸಿದರು.
ಕೊತ್ತಲಪ್ಪ ಶರಣರು, ಚಂದ್ರಶೇಕರ್ ಸ್ವಾಮೀಜಿ, ಡಾ.ಸಂಜಯ್ ಜಿಂಗಾಡೆ, ಡಾ. ಸಂಜಯ್ ಇಮ್ಯಾನುವೆಲ್, ಡಾ.ಕಿಶನ್ ಜಾಧವ, ಶರಣಬಸ್ಸಪ್ಪ ಕೋಬಾಳ, ಭೀಮರಾವ ಸಾಳುಂಕೆ, ಮುಖೇಶ್ ಚವ್ಹಾಣ, ದತ್ತಾ ಜಿಂಗಾಡೆ,ಬಸವರಾಜ ಸಾತ್ಯಾಳ, ಬಸವರಾಜ ಮದ್ರಿಕಿ, ಅನಿಲ್ ಹಿಬಾರೆ ವೇದಿಕೆ ಮೇಲೆ ಇದ್ದರು.
೫೨ ಜನ ರಕ್ತದಾನ ಮಾಡಿದರು.೨೬ ಜನರಿಗೆ ಉಚಿತವಾಗಿ ಇಸಿಜಿ ಪರೀಕ್ಷೆ ಮಾಡಲಾಯಿತು. ಗೋವಿಂದ ಕುಸಾಳೆ, ಬಜರಂಗದದ ಉದಯ ನಂದಗೌಲಿ, ಸುಭಾಷ ಜಾಪೂರ, ಅಭಿ?ಕ, ಶಿವಕುಮಾರ ತಳವಾರ,ಲೋಹಿತ್ ಮಳಖೇಡ,ದಾಮೋದರ ಭಟ್ ಇತರರು ಇದ್ದರು.