ಕೆ.ತಳ್ಳಳ್ಳಿ:ವಿದ್ಯುತ್ ಶಾಕ್‌ಗೆ ಮಗು ಬಲಿ

0
21

ಸುರಪುರ: ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದಲ್ಲಿ ವಿದ್ಯುತ್ ತಂತಿ ತುಳಿದು ಮಗುವೊಂದು ಸಾವನ್ನಪ್ಪಿರುವ ಘಟನೆ ಧಾರುಣ ಘಟನೆ ನಡೆದಿದೆ.

ಗ್ರಾಮದಲ್ಲಿನ ಕುಡಿಯುವ ನೀರಿನ ಬಾವಿ ದುರಸ್ತಿಗಾಗಿ ಬಾವಿಯ ಮೇಲ್ಭಾಗದಲ್ಲಿ ಸರಳುಗಳ ಜೋಡಣೆಗಾಗಿ ವೆಲ್ಡಿಂಗ್ ಮಾಡುತ್ತಿರುವ ಸಂದರ್ಭದಲ್ಲಿ ಪಕ್ಕದಲ್ಲಿದ್ದ ವಿದ್ಯುತ್ ಕಂಬದಿಂದ ವೆಲ್ಡಿಂಗ್ ಮಷಿನ್‌ಗೆ ವಿದ್ಯುತ್ ತಂತಿ ಹಾಕಿ ಸಂಪರ್ಕ ಪಡೆಯಲಾಗಿತ್ತು.

Contact Your\'s Advertisement; 9902492681

ಈ ಸಂದರ್ಭದಲ್ಲಿ ವಿದ್ಯುತ್ ತಂತಿ ನೋಡದೆ ಆಟವಾಡಲು ಬಂದ ೪ ವರ್ಷದ ಮಗು ವಿದ್ಯುತ್ ತಂತಿ ತುಳಿದ ಪರಿಣಾಮ ಶಾಕ್‌ಗೆ ಮಗು ಸ್ಥಳದಲ್ಲಿ ಸಾವನ್ನಪ್ಪಿದೆ.ಮಗುವಿನ ಸಾವಿಗೆ ಗ್ರಾಮದ ಜನರು ಶೋಕವ್ಯಕ್ತಪಡಿಸಿದ್ದಾರೆ.ಮಗುವಿನ ಸಾವಿಗೆ ದುಃಖಕ್ಕೊಳಗಾದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here