ಶಾಲಾ ಮಕ್ಕಳೊಂದಿಗೆ ಗಜವೇ 12ನೇ ಸಂಸ್ಥಾಪನ ದಿನದ ಆಚರಣೆ

0
26

ಆನೇಕಲ್: ತಾಲ್ಲೂಕು ಆವಡದೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸೆಪ್ಟೆಂಬರ್ 17ರಂದು ಗಂಧದನಾಡು ಜನಪರ ವೇದಿಕೆ-ಗಜವೇಯ 12ನೇ ಸಂಸ್ಥಾಪನ ದಿನವನ್ನು ಮಕ್ಕಳಿಗೆ ನೋಟ್ ಪುಸ್ತಕಗಳು, ಲೇಖನ ಸಾಮಾಗ್ರಿಗಳು ಹಾಗೂ ಸಿಹಿ ಹಂಚುವುದರ ಮೂಲಕ ಆಚರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಗಜವೇ ರಾಜ್ಯ ಗೌರವಾಧ್ಯಕ್ಷರಾದ ಮಂಡ್ಯ ರಮೇಶ್, ಗಜವೇ ಸಂಸ್ಥಾಪಕ ಅಧ್ಯಕ್ಷರಾದ ವಿಜಯರಾಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ರಾಜ್ಯ ಕಾರ್ಯದರ್ಶಿ ದೇವರಾಜ್ ನಾಯ್ಕ, ರಾಜ್ಯ ಖಜಾಂಚಿ ಬಂಡಾಪುರ ಶ್ರೀನಿವಾಸ್, ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಸ್ವಾಭಿಮಾನಿ ಸತೀಶ್, ವಕೀಲರು/ಕಾನೂನು ಸಲಹೆಗಾರರಾದ ಪುರುಷೋತ್ತಮ್, ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಗೀತಾರವಿ, ಆನೇಕಲ್ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಬೀಡಾ ರಾಜಪ್ಪ, ಪ್ರಧಾನ ಕಾರ್ಯದರ್ಶಿ ಕೌಶಿಕ್ ರೆಡ್ಡಿ, ಬೆಂಗಳೂರು ದಕ್ಷಿಣಾ ವಿಧಾನಸಭಾ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಮಹಂತಲಿಂಗಾಪುರ ಮಂಜು, ಅರ್ಜುನ್, ಆವಡದೇನಹಳ್ಳಿ ಡೈರಿ ಕಾರ್ಯದರ್ಶಿ ರವಿ, ಗಜವೇ ಮುಖಂಡರಾದ ಪ್ರಶಾಂತ್, ವರುಣ್, ಟಿವಿಎಸ್ ಟ್ರಸ್ಟ್ ಸಂಯೋಜಕರಾದ ವನಜಾಕ್ಷಿ, ಪ್ರೇಮ ಹಾಗೂ ಶಿಕ್ಷಕವೃಂದ ಹಾಜರಿದ್ದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಕಾನೂನು ವಿದ್ಯಾರ್ಥಿನಿ ಶಶಿ ಜನದನಿ ರವರು ಸ್ವಾಗತ ಕೋರಿದರೆ, ಸ್ವಾಭಿಮಾನಿ ಸತೀಶ್ ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here