ಕಲಬುರಗಿ: ಆಳಂದ ತಾಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಹಲವು ಗ್ರಾಮ ಪಂಚಾಯಿತಿಗಳಲ್ಲಿ 15ನೇ ಹಣಕಾಸಿನ ಯೋಜನೆಅಡಿಯಲ್ಲಿಅನುದಾನದ ದುರ್ಬಳಕೆ ಯಾಗಿದ್ದುಕೂಡಲೇಇದರಲ್ಲಿ ಭಾಗಿಯಾದ ಪಂಚಾಯತಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತವಾದ ಕ್ರಮಕೈಗೊಳ್ಳಬೇಕು ಎಂದುಜಯಕರ್ನಾಟಕಜನಪರ ವೇದಿಕೆಯಜಿಲ್ಲಾಧ್ಯಕ್ಷ ಬಸವರಾಜ್ ಕೊರಳ್ಳಿ ಆಗ್ರಹಿಸಿದರು.
ಆಳಂದ ತಾಲೂಕಿನಕೊಡಲಹಂಗರಗಾ, ಸುಂಟನೂರ, ಕವಲಗ, ಕಿಣ್ಣಿ ಸುಲ್ತಾನ್, ಭೂಸನೂರ ಮತ್ತು ಸಾವಳೇಶ್ವರ ಗ್ರಾಮ ಪಂಚಾಯಿತಿಯಲ್ಲಿ ಪಂಚಾಯತ್ಅಭಿವೃದ್ಧಿ ಅಧಿಕಾರಿಗಳು 15ನೇ ಹಣಕಾಸಿನ ಯೋಜನೆಯಡಿಯಲ್ಲಿ ಹಾಗೂ ಮಹಾತ್ಮಗಾಂಧಿ ಉದ್ಯೋಗ ಖಾತರಿ ಯೋಜನೆ ಅನುದಾನವನ್ನುದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಆದ್ದರಿಂದಕೂಡಲೇ ಸದರಿಗ್ರಾಮ ಪಂಚಾಯತಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದಿನಾಂಕ 29 ರಂದುಜಿಲ್ಲಾ ಪಂಚಾಯತ್ಕಾರ್ಯಾಲಯ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.