ಕಲಬುರಗಿ: ಚಿತ್ತಾಪೂರ ತಾಲೂಕಿನ ಗುಂಡಗುರ್ತಿ ಗ್ರಾಮದಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಚಿತ್ತಾಪುರ ಮಂಡಲ ವತಿಯಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72 ನೇ ಜನ್ಮದಿನದ ಅಂಗವಾಗಿ ಬಿಜೆಪಿ ಯುವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಚೌವ್ಹಾಣ ಹಾಗೂ ಚಿತ್ತಾಪುರ ತಾಲ್ಲೂಕ ಯುವ ಮೋರ್ಚಾ ಅಧ್ಯಕ್ಷ ಅರುಣ ಎಸ್.ಯಾಗಾಪೂರ್ ಅವರು ರಕ್ತದಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷ ನಿಲಕಂಠ ಪಾಟೀಲ್, ರಾಮದಾಸ ಚೌವ್ಹಾಣ, ಭಿಮರೇಡ್ಡಿ ಕೂರಳ್ಳ, ಶಿವಕುಮಾರ ಯಾಗಾಪೂರ, ವಿಜಯಕುಮಾರ ಗುಂಡಗುರ್ತಿ, ಅಣ್ಣಾಪಗೌಡ, ಪಂಕಜಗೌಡ, ರವಿ ಬೆಕನಳ, ದೀಲಿಪ ದೊಡ್ಡಮನಿ, ದುರ್ಗಣ್ಣ ಹುಣಚೆರಾಯ ಬುಸ್ಸಾ ಹಾಗೂ ಪಕ್ಷದ ಮುಖಂಡರು ಇದ್ದರು.