ಸಂಸದ ಡಾ. ಉಮೇಶ್ ಜಾಧವ್ ಅವರಿಗೆ ಬಹಿರಂಗ ಚರ್ಚೆಗೆ ಮಲ್ಲಿಕಾರ್ಜುನ ನೀಲೂರ ಆಹ್ವಾನ

0
400

ಕಲಬುರಗಿ: ಖರ್ಗೆ ಕುಟುಂಬಕ್ಕೆ ಧೂಳಿಪಟ ಭೀತಿ ಎಂದ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ್ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಚಿಂಚೋಳಿ ತಾಲೂಕಿಗೆ ಎಷ್ಟು ಅನುದಾನ ತಂದಿದ್ದೀರಿ ಎಂಬ ಮಾಹಿತಿ ಚಿಂಚೋಳಿ ನಾಗರಿಕರಿಗೆ ಗೊತ್ತು. ಲೋಕಸಭಾ ಸದಸ್ಯರಾದ ಬಳಿಕ ಎಷ್ಟು ಅಕ್ರಮ ಆಸ್ತಿ ಮಾಡಿದ್ದೀರಿ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿರುವ ವಿಷಯವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾರ್ಜುನ ನೀಲೂರ ಕೀಡಿಕಾರಿದ್ದಾರೆ.

ಕಲಬುರಗಿ ಜಿಲ್ಲೆಗೆ ಸಂಸದರಾದ ಬಳಿಕ ಯಾವ- ಯಾವ ಯೋಜನೆಗಳನ್ನು ತಂದಿದ್ದೀರಿ ಮತ್ತು ಎಷ್ಟು ಅನುದಾನ ತಂದಿರುತ್ತೀರಿ ಎಂಬುದರ ಕುರಿತು ಬಹಿರಂಗ ಚರ್ಚೆ ಬನ್ನಿ. ಕಾಂಗ್ರೆಸ್ ಪಕ್ಷದಿಂದ ಪ್ರತಿನಿಧಿಸಿದ ಡಾ. ಮಲ್ಲಿಕಾರ್ಜುನ ಖರ್ಗೆಜೀ ಅವರು ಈ ಜಿಲ್ಲೆಗೆ ನೀಡಿರುವ ಕೊಡುಗೆ ಏನು ಎಂಬುದನ್ನು ಮನವರಿಕೆ ಮಾಡಲು ಸಿದ್ಧರಿದ್ದೇವೆ. ಡಾ. ಮಲ್ಲಿಕಾರ್ಜುನ ಖರ್ಗೆಯವರು ರೈಲ್ವೆ ಸಚಿವರಾಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ 22 ಹೊಸ ರೈಲು ಸಂಚಾರವನ್ನು ಪ್ರಾರಂಭಿಸಿದರು.

Contact Your\'s Advertisement; 9902492681

ನಿರಂತರ ಶ್ರಮದೊಂದಿಗೆ ಕ್ಷೇತ್ರದ ಜನತೆಯ ಸರ್ವತೋಮುಖ ಅಭಿವೃದ್ಧಿಗೆ ಹೈದ್ರಾಬಾದ ಕರ್ನಾಟಕಕ್ಕೆ ವಿಶೇಷ ಸೌಲಭ್ಯ ಒದಗಿಸುವ ಸಂವಿಧಾನದ 371 (ಜೆ) ಕಲಂಗೆ ತಿದ್ದುಪಡಿ ತರುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ಭಾಗದಲ್ಲಿ ಇಂಜಿನಿಯರಿಂಗ್, ಮೆಡಿಕಲ್ ಹಾಗೂ ಇನ್ನಿತರೆ ಉನ್ನತ ವಿದ್ಯಾಭ್ಯಾಸ ಹಾಗೂ ಅಧಿಕಾರ ಪಡೆಯುವಲ್ಲಿ ಜಾತಿಭೇದ ಮರೆತು ಎಲ್ಲಾ ವರ್ಗದವರಿಗೂ ಅನುಕೂಲ ಮಾಡಿಕೊಟ್ಟಿರುವ ಏಕೈಕ ವ್ಯಕ್ತಿ ಯಾರಾದರೂ ಇದ್ದರೆ ಅವರು ಡಾ. ಮಲ್ಲಿಕಾರ್ಜುನ ಖರ್ಗೆಯವರು.

ಸುಮಾರು 625 ಎಕರೆ ವಿಸ್ತೀರ್ಣದಲ್ಲಿ 1100 ಕೋಟಿ ರೂ. ವೆಚ್ಚದಲ್ಲಿ ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪನೆ ಮಾಡಿರುತ್ತಾರೆ. ಗುರುಮಿಠಕಲ್ ಕ್ಷೇತ್ರದ ಉದ್ದಗಲಕ್ಕೂ ನೂರಾರು ಕೆರೆಗಳ ನಿರ್ಮಾಣ ಮಾಡಿದ್ದಾರೆ. ಕಲಬುರಗಿ- ಯಾದಗಿರಿ ಜಿಲ್ಲೆಗಳಲ್ಲಿ ನದಿಗಳಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್‍ಗಳನ್ನು ನಿರ್ಮಿಸಿರುವುದರಿಂದ ರೈತರಿಗೆ ಅನುಕೂಲವಾಗಿರುತ್ತದೆ. ಕಲಬುರಗಿಯಲ್ಲಿ ಪೊಲೀಸ್ ತರಬೇತಿ ಕೇಂದ್ರ ಸ್ಥಾಪನೆ ಮಾಡಿದರು. ಕಲಬುರಗಿ- ಬೆಂಗಳೂರಿನಲ್ಲಿ ಜರ್ಮನ್ ಸಹಕಾರ ತಾಂತ್ರಿಕತೆಯೊಂದಿಗೆ ರೂ.80 ಕೋಟಿ ವೆಚ್ಚದಲ್ಲಿ ವಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದರು.

ಯಾದಗಿರಿ ಜಿಲ್ಲೆಯಲ್ಲಿ ರೈಲ್ವೆ ಕೋಚ್ ಫ್ಯಾಕ್ಟರಿಗೆ 750 ಕೋಟಿ ರೂ.ಗಳ ಮಂಜೂರು ತಂದಿರುತ್ತಾರೆ. ಯಾದಗಿರಿ ನಗರದ ಹೊರವಲಯದಲ್ಲಿ ಬಸ್ ಕೋಚ್ ನಿರ್ಮಾಣ ಘಟಕ ಸ್ಥಾಪಿಸಿರುತ್ತಾರೆ. ಕಲಬುರಗಿಯಲ್ಲಿ ಎಎಸ್‍ಐಸಿ ಆಸ್ಪತ್ರೆ ಸಂಕೀರ್ಣದ ನಿರ್ಮಾಣ, ಆಸ್ಪತ್ರೆಗೆ ಹೊಂದಿಕೊಂಡಂತೆ ವಿದ್ಯಾರ್ಥಿಗಳಿಗೆ ವೈದ್ಯಕೀಯ ಕಾಲೇಜು, ದಂತ ವೈದ್ಯಕೀಯ ಕಾಲೇಜು, ಪ್ಯಾರಾ ಮೆಡಿಕಲ್ ಕಾಲೇಜು, ಫಾರ್ಮಸಿ ಕಾಲೇಜುಗಳನ್ನು ನಿರ್ಮಾಣಗೊಳಿಸಿರುತ್ತಾರೆ. ಹೀಗೆ ಮಲ್ಲಿಕಾರ್ಜುನ ಖರ್ಗೆ ಅವರ ಅಭಿವೃದ್ಧಿ ಕಾರ್ಯಗಳನ್ನು ಹೇಳುತ್ತಾ ಹೋದರೆ ಸಮಯ ಸಾಕಾಗುವುದಿಲ್ಲ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಗುಣಗಾನ ಮಾಡಿದ್ದಾರೆ.

8 ಕ್ಷೇತ್ರಗಳ ವ್ಯಾಪ್ತಿಗೆ ಬರುವ ಪರಿಶಿಷ್ಟ ಜಾತಿಗೆ ಬರುವ ಮಾದಿಗ ಸಮಾಜದವರಿಗೆ ನೀವು ನನ್ನನ್ನು ಮತ ನೀಡಿದರೆ ನಿಮ್ಮ ಬೇಡಿಕೆಯನ್ನು ಸದಾಶಿವ ಆಯೋಗದ ವರದಿಯನ್ನು ಜಾರಿಗೆ ತರಲು ಬದ್ಧನಿದ್ದೇನೆ ಎಂದು ಹೇಳಿ ಮತ ಪಡೆದಿರುತ್ತೀರಿ. ಮತ್ತು ಜಯಶೀಲರಾಗಿರುತ್ತೀರಿ. ಆದರೆ ಸಮಾಜದವರಿಗೆ ಕಲಬುರಗಿ ಜಿಲ್ಲೆಯಲ್ಲಿ ಬರುವಂತಹ ಬೋರ್ಡ್ ಚೇರ್ಮನ್ ಮತ್ತು ರಾಜ್ಯದಲ್ಲಿರುವ ಬೋರ್ಡ್ ಅಥವಾ ಚೇರ್ಮನ್ ಎಷ್ಟು ಜನರಿಗೆ ಮಾಡಿದ್ದೀರಾ? ಇದೇ ರೀತಿ ಕೋಳಿ ಸಮಾಜದವರಿಗೆ ಎಸ್.ಟಿ. ಗೆ ಸೇರ್ಪಡೆ ಮಾಡುತ್ತೇನೆಂದು ಸುಳ್ಳು ಆಶ್ವಾಸನೆ ನೀಡಿರುತ್ತೀರಿ. ಆದರೆ ಇನ್ನೂವರೆಗೆ ಆ ಸಮಾಜದವರಿಗೆ ನ್ಯಾಯ ಒದಗಿಸಿಕೊಟ್ಟಿರುವುದಿಲ್ಲ. ಎಲ್ಲಾ ಸಮಾಜದವರ ಮತಗಳನ್ನು ಪಡೆದು ಸುಳ್ಳು ಆಶ್ವಾಸನೆಗಳನ್ನು ನೀಡಿರುತ್ತೀರಿ.

ಪ್ರತಿಯೊಂದು ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಇದರ ಕುರಿತು ನೀವು ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಮತ್ತು ಇಲ್ಲಿಯವರೆಗೆ ಕಲಬುರಗಿ ಜಿಲ್ಲೆಗೆ ಎಷ್ಟು ಅನುದಾನ ಬಿಡುಗಡೆ ಮಾಡಿರುತ್ತೀರಿ? ಕಲಬುರಗಿ ಜಿಲ್ಲೆಗೆ ನಿಮ್ಮ ಕೊಡುಗೆ ಶೂನ್ಯವಾಗಿದೆ. ಎಸ್.ಸಿ.ಪಿ., ಟಿ.ಎಸ್.ಪಿ. ಯೋಜನೆಯಡಿ ಎಷ್ಟು ಜನರಿಗೆ ಈ ಯೋಜನೆಯಲ್ಲಿ ಅನುಕೂಲ ಮಾಡಿಕೊಟ್ಟಿದ್ದೀರಿ? ಕೇಂದ್ರ ಹಾಗೂ ರಾಜ್ಯದಲ್ಲಿ ನಿಮ್ಮದೇ ಆದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ಕಲಬುರಗಿ ಜಿಲ್ಲೆಗೆ ಮಂಜೂರಾದ ಯೋಜನೆಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗುತ್ತಿದೆ. ನಿಮಗೆ ಮತ ನೀಡಿದ ಜನರಿಗೆ ನೀವು ಹೇಗೆ ಮುಖ ತೋರಿಸುತ್ತೀರಾ? ಎಂದು ಪ್ರಶ್ನಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here