ಚಿಂಚೋಳಿ: ರಾಜ್ಯ ಹೆದ್ದಾರಿ ದುರಸ್ತಿಗೆ ಆಗ್ರಹ

0
27

ಚಿಂಚೋಳಿ: ತಾಲೂಕಿನ ಸುಲೇಪೇಟ – ಚಿಂಚೋಳಿ  ಮಾರ್ಗದ ಸುಲೇಪೇಟ ಗ್ರಾಮದ ಚಿಂಚೋಳಿ ರಸ್ತೆಯಲ್ಲಿರುವ  ಹೋಂಡಾ ಬೈಕ್ ಶೋರುಮ್ ಎದುರುಗಡೆ ಕಂಡು ಬರು ರಾಜ್ಯ ಹೆದ್ದಾರಿ  ರಸ್ತೆಯು  ಹದಗೆಟ್ಟು ಬೃಹತ ತೆಗ್ಗು ಗುಂಡಿಗಳು ಬಿದ್ದೀವೆ ಇದರಿಂದ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತೀದೆ ಕೂಡಲೇ ರಸ್ತೆ ದುರಸ್ತಿಗೆ ಮುಂದಾಗಬೇಕೆಂದು  ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಅವರು ಆಗ್ರಹಿಸಿದ್ದಾರೆ.

ಹಲವಾರು ತಿಂಗಳಿನಿಂದ  ರಾಜ್ಯ ಹೆದ್ದಾರಿ ರಸ್ತೆ ಮಧ್ಯದಲ್ಲಿ ಹದಗೆಟ್ಟು ದೊಡ್ಡ ಗುಂಡಿಗಳು ಬಿದ್ದಿರುವದರಿಂದ  ಬೈಕಗಳು ಸ್ಕಿಡ್ ಆಗಿ ಸವಾರರು ಆಯಾತಪ್ಪಿ ಬೀಳುತ್ತೀದ್ದಾರೆ. ಈ ಕುರಿತು ಸಾರ್ವಜನಿಕರು ಸಾಕಷ್ಟು ಬಾರಿ ಸಂಭಂದಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೂ ಇಲ್ಲಿಯವರೆಗೂ ಅಧಿಕಾರಿಗಳು ದುರಸ್ತಿಗೆ ಮುಂದಾಗಿಲ್ಲಾ ರಾಜ್ಯ ಹೆದ್ದಾರಿ ಇರುವುದರಿಂದ ನಿತ್ಯ ನೂರಾರು ವಾಹನಗಳು ಓಡಾಡುತವೆ ದಿನದಿಂದ  ದಿನಕ್ಕೆ ವಾಹನಗಳ ಸಂಖ್ಯೆಯು ಹೆಚ್ಚಾಗುತ್ತೀವೆ ರಾತ್ರಿ ಸಮಯದಲ್ಲಿ ತೆಗ್ಗು ಗುಂಡಿಗಳು ಕಾಣದೆ ಬೈಕ್ ಸವಾರರು ಆಯಾ ತಪ್ಪಿಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟು ಇವೆ ಅಲ್ಲದೆ ಆಸ್ಪತ್ರೇಗೆ ತೇರಳು ಜನರಿಗೆ ಶಾಲೆ ಕಾಲೇಜು ವಿದ್ಯಾರ್ಥಿಗಳಿಗೆ ತುರ್ತು ಪರಿಸ್ಥಿತಿಯಲ್ಲಿರುವರಿಗೆ ಗರ್ಭಿಣಿಯರಿಗೆ  ಸಮಸ್ಯೆ ಎದುರಾಗಿದೆ ಈ ಬೃಹತ ತೆಗ್ಗುಗಳು ನಿರ್ಮಾಣವಾಗಿದರಿಂದ ಸದಾ ವಾಹನ ಸವಾರರು ಜೀವ ಭಯದಲ್ಲಿಯೆ ಸಂಚರಿಸುವಂತಾಗಿದೆ  ನೂರಾರು ಅಧಿಕ ವಾಹನಗಳ ಓಡಾಟದಿಂದ ನಿತ್ಯ ರಸ್ತೆಯು ಕಿತ್ತೊಗುತ್ತೀದೆ ರಸ್ತೆಯ ತುಂಬ ಜಲ್ಲಿಕಲ್ಲುಗಳು ಏಳುತ್ತೀವೆ ಇದರಿಂದ ಸುಗಮ ಸಂಚಾರಕ್ಕೆ ಕಾಟ ಹೆಚ್ಚಾಗಿದೆ ಎಂದು ಆರೋಪಿಸಿದ್ದಾರೆ.

Contact Your\'s Advertisement; 9902492681

ಇನ್ನಾದರೂ ಶಾಸಕರು ಅಧಿಕಾರಿಗಳು ನಿರ್ಲಕ್ಷತನ ತೋರದೆ ಸವಾರರ ಸಂಕಷ್ಟ ತಪ್ಪಿಸಲೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತಹ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗಬೇಕೆಂದು ಸಂತೋಷ ಜಾಬೀನ್ ಅವರು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here