ಶಿವಮಂದಿರದ ಆವರಣದಲ್ಲಿ ಗಾಂಜಾ ಮಾರಾಟ: ಮೂವರ ಸೆರೆ

0
111

ಕಲಬುರಗಿ: ನಗರದ ಬಾಪು ನಗರದ ಮಾಂಗರವಾಡಿ ಗಲ್ಲಿಯಲ್ಲಿನ ಮಿಲಿಂದ್ ಕಾಲೇಜು ಹಿಂದುಗಡೆ ಇರುವ ಶಿವಮಂದಿರದ ಆವರಣದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರನ್ನು ಪೋಲಿಸರು ಬಂಧಿಸಿದ್ದಾರೆ.

ಬಂಧಿತರನ್ನು ದತ್ತಾತ್ರೇಯ್ ವಿನಾಯಕರಾವ್ ಬಾಲ್ಕೆ, ರಾಹುಲ್ ಆನಂದ್ ಮಾಂಗರವಾಡಿ ಮತ್ತು ಮಹೇಶಕುಮಾರ್ ಉಪಾಧ್ಯಾ ಎಂದು ಗುರುತಿಸಲಾಗಿದೆ. ಬಂಧಿತರಿಂದ ೨೪,೦೦೦ರೂ.ಗಳ ಮೌಲ್ಯದ ಮೂರು ಕೆಜಿ ಗಾಂಜಾ, ೪೨೦೦೦ರೂ.ಗಳ ಮೌಲ್ಯದ ಎರಡು ದ್ವಿಚಕ್ರವಾಹನಗಳು, ೧೯೦೦ರೂ.ಗಳ ಮೌಲ್ಯದ ಮೂರು ಮೊಬೈಲ್‌ಗಳು ಸೇರಿ ಒಟ್ಟು ೬೭,೯೦೦ರೂ.ಗಳ ಮೌಲ್ಯದ್ದನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ.

Contact Your\'s Advertisement; 9902492681

ಖಚಿತ ಭಾತ್ಮಿ ಮೇರೆಗೆ ಬ್ರಹ್ಮಪೂರ್ ಪೋಲಿಸ್ ಠಾಣೆಯ ಪಿಐ ಶ್ರೀಮಂತ್ ಇಲ್ಲಾಳ್ ಅವರ ನೇತೃತ್ವದಲ್ಲಿ ಎಎಸ್‌ಐ ಸಲಿಮೋದ್ದೀನ್, ಸಿಬ್ಬಂದಿಗಳಾದ ಪಂಡಿತ್, ಸುರೇಶ್, ವೆಂಕಟೇಶ್ ಅವರು ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಪ್ರಕರಣದಲ್ಲಿ ಇನ್ನೋರ್ವ ಆರೋಪಿ ಬೀದರ್‌ನ ಇರಾನಿ ಗಲ್ಲಿಯ ನಿವಾಸಿ ಫಿರೋಜ್ ಅಲಿ ರಾಯಕ್ ಅಲಿ ಪರಾರಿಯಾಗಿದ್ದು, ಆತನ ಪತ್ತೆ ಕಾರ್ಯಾಚರಣೆಯನ್ನು ಪೋಲಿಸರು ಮುಂದುವರೆಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here