ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಕರಡು ಮರುಮಂಡಿಸಿ: ಡಾ.ಟಿ.ಎಸ್ ನಾಗಾಭರಣ ಒತ್ತಾಯ

0
7

ಬೆಂಗಳೂರು: ಕನ್ನಡ ಆಶಯಗಳನ್ನು ನಾಡಿನಲ್ಲಿ ಅನುಷ್ಠ್ಠಾನಗೊಳಿಸುವುದಕ್ಕೆ ಕನ್ನಡ ಬದ್ಧತೆಯುಳ್ಳ ಮನಸ್ಸುಗಳು ಅತ್ಯಂತ ಮುಖ್ಯವಾಗಿದ್ದು,ಈ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸಿದ್ದಪಡಿಸಿ ಸಲ್ಲಿಸಿದ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಕರಡÀನ್ನು ಯಥಾವತ್ತಾಗಿಯೇ ಮಂಡಿಸಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್. ನಾಗಾಭರಣ ಅವರು ಮನವಿ ಮಾಡಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಂತರ ತಮ್ಮ ಕಾಲಾವಧಿಯಲ್ಲಿ ಮಾಡಿದ ಕನ್ನಡ ಕಾಯಕಗಳ ಕುರಿತು ವಿಧಾನಸೌಧದಲ್ಲಿರುವ ತಮ್ಮ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

Contact Your\'s Advertisement; 9902492681

ಕನ್ನಡ ಆಶಯಗಳನ್ನ ಎಲ್ಲೆಡೆ ಪಸರಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕದ ಕರಡನ್ನು ಸಮಗ್ರವಾಗಿ ಎಲ್ಲ ರೀತಿಯಿಂದಲೂ ಅಧ್ಯಯನ ನಡೆಸಿ ಸಿದ್ದಪಡಿಸಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಗೆ ಕಳುಹಿಸಿಕೊಡಲಾಗಿತ್ತು; ಅದರಲ್ಲಿ ಕೆಲವು ಬದಲಾವಣೆಗಳೊಂದಿಗೆ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲಾಗಿದೆ. ಅದರಲ್ಲಿ ಕನ್ನಡ ಭಾಷೆಯ ಅನುಷ್ಠಾನಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವನ್ನು ಜಾರಿ ಪ್ರಾಧಿಕಾರಗಳಾಗಿ ಕಾರ್ಯನಿರ್ವಹಿಸತಕ್ಕದ್ದು ಎಂದು ನಮ್ಮ ಕರಡುವಿನಲ್ಲಿ ತಿಳಿಸಲಾಗಿತ್ತು.

ಅದನ್ನು ಕೈಬಿಡುವುದರ ಮೂಲಕ ಪ್ರಾಧಿಕಾರದ ಅಧಿಕಾರ ಅಂದರೇ ಸ್ವಾಯತ್ತತೆಯನ್ನು ಮೊಟಕುಗೊಳಿಸಲಾಗಿದೆ;ಇದು ಸರಿಯಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ ಅವರು ಈ ಕುರಿತು ಪ್ರಾಧಿಕಾರ ಸಿದ್ದಪಡಿಸಿದ ಕರಡನ್ನು ಯಥಾವತ್ತಾಗಿ ಮಂಡಿಸಿ ಬರುವ ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆಯಾಗಬೇಕು;ಇದು ನನ್ನ ಕನಸು ಎಂದರು.

ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಇದುವರೆಗೆ 87 ಪರಿಶೀಲನಾ ಸಭೆ ನಡೆಸಲಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಪ್ರಗತಿ ಪರಿಶೀಲಿಸಲಾಗಿದೆ.ಕನ್ನಡ ಅನುಷ್ಠಾನ ವಿಷಯದಲ್ಲಿ ಉದಾಸೀನತೆ ತೋರಿದ 180 ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ವಿವರಿಸಿದ ಅವರು ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು ಮಾಡಿದರೂ ಕ್ರಮಗಳಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು ಮತ್ತು ಬದ್ಧತೆ ಇರದಿದ್ದರೇ ಕನ್ನಡ ಅನುಷ್ಠಾನ ಕಷ್ಟವಾಗಲಿದೆ ಎಂದರು.

ಕನ್ನಡ ಕಾಯಕ ವರ್ಷದ ಅಂಗವಾಗಿ ಬ್ಯಾಂಕ್‍ಗಳ ಕನ್ನಡ ಅಭಿಯಾನ,ಮಾಧ್ಯಮಗಳಲ್ಲಿ ಕನ್ನಡ ಅಭಿಯಾನ,ನ್ಯಾಯಾಲಯದಲ್ಲಿ ಕನ್ನಡ ಅಭಿಯಾನ, ಗ್ರಾಹಕ ಸೇವೆಗಳಲ್ಲಿ ಕನ್ನಡ,ವೈದ್ಯಕೀಯ ವಲಯದಲ್ಲಿ ಕನ್ನಡ ಸೇರಿದಂತೆ ವಿವಿಧ ರೀತಿಯ ಅಭಿಯಾನಗಳನ್ನು ಮಾಡಲಾಗಿದೆ; ಎಲ್ಲ ಅಭಿಯಾನಗಳಿಂದಲೂ ಅಭೂತಪೂರ್ವ ಪ್ರಕ್ರಿಯೆ ದೊರಕಿದೆ ಎಂದು ಅವರು ಹೇಳಿದರು.

ಕನ್ನಡ ಕಾಯಕ ವರ್ಷದ ಅಭಿಯಾನದಡಿ ಬಹಳಷ್ಟು ಕೆಲಸಗಳನ್ನು ನಮ್ಮ ಪ್ರಾಧಿಕಾರ ಮಾಡಿದೆ ಎಂದು ಹೇಳಿದ ಅವರು 50 ಪ್ರಕಟಣೆಗಳನ್ನು ಹೊರತರಲಾಗಿದೆ. ನಮ್ಮ ಪ್ರಾಧಿಕಾರದಿಂದ ಹೊರತರಲಾದ ಪುಸ್ತಕಗಳಿಗೆ ಕ್ಯೂಆರ್ ಕೋಡ್ ಸ್ಕ್ಯಾನ್ ಕೂಡ ಅಳವಡಿಸಲಾಗಿದ್ದು,ಪುಸ್ತಕ ಓದಲು ಸಾಧ್ಯವಾಗದವರು;ತಂತ್ರಜ್ಞಾನದ ಮೂಲಕ ಆಲಿಸಬಹುದಾಗಿದೆ ಎಂದರು.

ತಂತ್ರಜ್ಞಾನ ಬಳಸಿಕೊಂಡು ಮಕ್ಕಳ ಬೆಳವಣಿಗೆಗೆ ಪೂರಕವಾಗುವ ಅನೇಕ ಪ್ರಕಟಣೆಗಳನ್ನು ಹೊರತರಲಾಗಿರುವುದನ್ನು ಸಹ ಅವರು ಈ ಸಂದರ್ಭದಲ್ಲಿ ಪ್ರಸ್ತಾಪಿಸಿದರು.

ಕನ್ನಡ ಕಾಯಕ ವರ್ಷ, ಕಾಯಕ ವರ್ಷದ ಅಂಗವಾಗಿ ನಡೆಸಿದ ಅಭಿಯಾನಗಳು, ನಾಗನಾಥಪುರದಲ್ಲಿನ ಭಾಷ್ ಸಂಸ್ಥೆಯ ಕಾರ್ಮಿಕರ ಸಮಸ್ಯೆಗೆ ಪರಿಹಾರ, ಅನಿವಾಸಿ,ಹೊರನಾಡು-ಗಡಿನಾಡು ಕನ್ನಡಿಗರು, ಕಾಸರಗೋಡಿನ ಕೇಂದ್ರೀಯ ವಿಶ್ವವಿದ್ಯಾಲಯ ಮತ್ತು ಅಲ್ಲಿನ ಕನ್ನಡ ಶಾಲೆಗಳಿಗೆ ಕನ್ನಡ ಶಿಕ್ಷಕರನ್ನು ನೇಮಿಸುವುದು ಸೇರಿದಂತೆ ತಮ್ಮ ಅವಧಿಯಲ್ಲಿ ಮಾಡಿದ ಕನ್ನಡ ಕಾಯಕಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಈ ಸಂದರ್ಭದಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಮತ್ತಿತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here