ಜಗತ್ತಿನ ಸಮಸ್ಯೆಗಳ ಪರಿಹರಿಸುವಲ್ಲಿ ವಿಜ್ಞಾನಿಗಳ ಪರಿಶ್ರಮ ಅಪಾರವಾದದ್ದು : ಶಾಸಕ ರೇವೂರ

0
34

ಕಲಬುರಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಜ್ಞಾನಿಗಳ ಜೀವನ, ಸಾಧನೆ ಅರಿತರೆ ಭವಿಷ್ಯದಲ್ಲಿ ತಮ್ಮನ್ನು ಸಂಶೋಧನಾ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಜನಸಾಮನ್ಯರ ಕೆಲಸದ ಹೊರೆಯನ್ನು ಕಡಿಮೆ ಮಾಡುವುದರಿಂದ ಹಿಡಿದು ಜಗತ್ತಿನ ಬಹುತೇಕ ಸಮಸ್ಯೆ, ಸವಾಲುಗಳಿಗೆ ತಮ್ಮ ಸಂಶೋಧನೆಗಳ ಮೂಲಕÀ ಪರಿಹಾರ ಒದಗಿಸುವಲ್ಲಿ ವಿಜ್ಞಾನಿಗಳ ಪಾತ್ರ ಅಪಾರವಾಗಿದೆ ಎಂದು ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಸಿ. ಪಾಟೀಲ ರೇವೂರ ಅಭಿಪ್ರಾಯಪಟ್ಟರು.

ಇಂದು ನಗರದ ಸರ್ವಜ್ಞ ಹಾಗೂ ಜಸ್ಟೀಸ್ ಶಿವರಾಜ ಪಾಟೀಲ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ವಿಜ್ಞಾನ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ಸಂಜುಕುಮಾರ ಪಟ್ಟಣಕರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ ಬೆಳೆಸುವಲ್ಲಿ ವಸ್ತು ಪ್ರದರ್ಶನ ಬಹುಮುಖ್ಯ ಪಾತ್ರ ವಹಿಸುತ್ತದೆ. ವಿಜ್ಞಾನ ಕ್ಷೇತ್ರದಲ್ಲಾದ ನೂತನ ಆವಿಷ್ಕಾರಗಳ ಮಾಹಿತಿ ಹಂಚಿಕೊಳ್ಳುವುದರೊಂದಿಗೆ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿರುವುದನ್ನು ಅವರು ಅಭಿನಂದಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವಿಜ್ಞಾನ ಪರಿಷತ್ತಿನ ಅಧ್ಯಕ್ಷ ಗಿರೀಶ ಕಡ್ಲೇವಾಡ ಮಾತನಾಡಿ ವಿಜ್ಞಾನ ತಂತ್ರಜ್ಞಾನದ ಮಹತ್ವ ಜನಸಾಮಾನ್ಯರಿಗೆ ತಿಳಿಸುವ ಹಾಗೂ ಇತ್ತೀಚಿನ ದಿನಮಾನಗಳಲ್ಲಿ ವಿಜ್ಞಾನ ಕ್ಷೇತ್ರದಲ್ಲಾದ ಬೆಳವಣಿಗೆಗಳ ಮಾಹಿತಿ ಜನಸಾಮಾನ್ಯರಿಗೆ ತಿಳಿಸುವ ಉದ್ದೇಶದಿಂದ ಸಂಘಟಿಸಲಾದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ವಿದ್ಯಾರ್ಥಿಗಳು ತಮ್ಮಲ್ಲಿನ ಪ್ರತಿಭೆ ಹಾಗೂ ಸೃಜನಶೀಲತೆ ಪ್ರದರ್ಶಿಸಿರುವುದು ಸಂತೋಷದ ಸಂಗತಿ ಎಂದರು.

ವೇದಿಕೆಯ ಮೇಲೆ ಕರಾವಿಪ ಖಜಾಂಚಿ ಈ ಬಸವರಾಜು, ವಿಜ್ಞಾನ ವಸ್ತು ಪ್ರದರ್ಶನದ ರಾಜ್ಯ ಸಂಯೋಜಕ ಪಿ.ಎಸ್.ಕೌಶಿಕ್, ಕಾರ್ಯಕಾರಿ ಸಮಿತಿ ಸದಸ್ಯ ಜಗನ್ನಾಥ ಹಲಮಡಗಿ, ಸರ್ವಜ್ಞ ಪಿ.ಯು. ಕಾಲೇಜಿನ ವ್ಯವಸ್ಥಾಪಕ ಕರುಣೇಶ ಹಿರೇಮಠ ಉಪಸ್ಥಿತರಿದ್ದರು. ವಿಜ್ಞಾನ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯ ಡಾ. ಕುಂಟೆಪ್ಪ ಗೌರಿಪೂರ ಸ್ವಾಗತಿಸಿದರು. ಇನ್ನೋರ್ವ ಸದಸ್ಯ ಅಣದೂರೆ ಮಹಾರುದ್ರಪ್ಪ ವಂದಿಸಿದರು.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಗೌರಿಬಿದನೂರು ನ್ಯಾಷನಲ್ ಕಾಲೇಜಿನ ಗಣೇಶ ಕುಮಾರ್ ಹಾಗೂ ಪಣೀಂದ್ರ ಅವರ ತಂಡ ರೂ.10000/- ನಗದು ಬಹುಮಾನದೊಂದಿಗೆ ಪ್ರಥಮ ಸ್ಥಾನ, ಭದ್ರಾವತಿಯ ಸರ್ ಎಮ್. ವಿ. ಸರ್ಕಾರಿ ವಿಜ್ಞಾನ ಕಾಲೇಜಿನ ಅಂಜಲಿ ಎ. ಹಾಗೂ ಪ್ರಜ್ಞಾ ಜೋಡಿದಾರ್ ಅವರ ತಂಡ ರೂ.7000/- ನಗದು ಬಹುಮಾನದೊಂದಿಗೆ ದ್ವಿತೀಯ ಸ್ಥಾನ, ದಾವಣಗೆರೆಯ ಡಿ.ಆರ್. ಎಮ್. ವಿಜ್ಞಾನ ಕಾಲೇಜಿನ ರಾಕೇಶ್ ಹಾಗೂ ತರುಣ ಅವರ ತಂಡ ರೂ.5000/- ನಗದು ಬಹುಮಾನದೊಂದಿಗೆ ತೃತೀಯ ಸ್ಥಾನ, ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಶ್ರಾವ್ಯಾ ಹಾಗೂ ಆಯೇಷಾ ಅವರ ತಂಡ ಮತ್ತು ಹುಮನಾಬಾದನ ಎಸ್.ವಿ. ಪದವಿ ಕಾಲೇಜಿನ ಶಿವಲೀಲಾ ಮತ್ತು ವಿಜಯಲಕ್ಷ್ಮಿ ಅವರ ತಂಡ ತಲಾ ರೂ 3000 ನಗದು ಬಹುಮಾನದೊಂದಿಗೆ ಸಮಾಧಾನಕಾರ ಬಹುಮಾನ ಪಡೆದುಕೊಂಡರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here