ಮಹಾಂತೇಶ ಗೋನಾಲರ ಗಜಲ್‍ಗೆ ದಸಾಪ ವತಿಯಿಂದ ಕಾವ್ಯ ಪ್ರಶಸ್ತಿ

0
11

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದ ಖ್ಯಾತ ಗಜಲ್ ಸಾಹಿತಿ ಮಹಾಂತೇಶ ಗೋನಾಲರವರಿಗೆ ರಾಜ್ಯ ದಲಿತ ಸಾಹಿತ್ಯ ಪರಿಷತ್ತು ನೀಡುವ ಗಜಲ್ ಕಾವ್ಯ ಪ್ರಶಸ್ತಿ ಲಭಿಸಿದೆ, ಅಕ್ಟೋಬರ್30 ರಂದು ನರಗುಂದಲ್ಲಿ ನಡೆಯಲಿರುವ ರಾಷ್ಟ್ರೀಯ ಗಜಲ್ ಸಾಹಿತ್ಯ ಸಮ್ಮೇಳನ ಹಾಗೂ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಬೆಳ್ಳಿ ಮಹೋತ್ಸವದಲ್ಲಿ ಪ್ರಶಸ್ತಿ ವಿತರಿಸಿ ಸನ್ಮಾನಿಸಲಾಗುವುದು ಎಂದು ದಲಿತ ಸಾಹಿತ್ಯ ಪರಿಷತ್ತು ಅಧ್ಯಕ್ಷ ಅರ್ಜುನ ಗೋಳಸಂಗಿ ತಿಳಿಸಿದ್ದಾರೆ.

ತಾಲೂಕಿ ದೇವರಗೋನಾಲ ಗ್ರಾಮದವರಾದ ಮಹಾಂತೇಶ ಗೋನಾಲರವರು ವೃತ್ತಿಯಲ್ಲಿ ಶಿಕ್ಷಕರಾಗಿದ್ದು ಕಾವ್ಯ ವಿಮರ್ಶೆ ಹಾಗೂ ಗಜಲ್ ಬರಹದಲ್ಲಿ ವಿಶೇಷ ಗಮನ ಸೆಳೆದಿದ್ದು, “ದಣಿದ ಮೌನ” ಹಾಗೂ “ಚಾಡಮಾರಿ ಶಹರಗಳು” ಗಜಲ್ ಸಂಕಲನಗಳನ್ನು ರಚಿಸಿದ್ದಾರೆ ದಣಿದ ಮೌನ ಕೃತಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಬಹುಮಾನ ದೊರೆತಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here