ಶ್ರೀ ಗುರುದತ್ತ ಗುರೂಜಿ 71 ನೇ ಜನ್ಮದಿನದ ನಿಮಿತ್ತ ರೋಗಿಗಳಿಗೆ ಹಣ್ಣು ಹಂಪಲಗಳು ವಿತರಣೆ

0
6

ಕಲಬುರಗಿ : ನಗರದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಪರಮ ಪೂಜ್ಯ ಶ್ರೀ ಶ್ರೀ ಗುರುದತ್ತ ಗುರೂಜಿ ಅವರ 71 ನೇ ಜನ್ಮದಿನದ ಹಾಗೂ 67 ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಸಹಜ ಸ್ಥಿತಿ ಯೋಗ ಸತ್ಸಂಗದ ಬಳಗದ ವತಿಯಿಂದ ರೋಗಿಗಳಿಗೆ ಹಣ್ಣು ಹಂಪಲಗಳು ವಿತರಿಸಲಾಯಿತು.

ನಿವೃತ್ತ ಕಾರ್ಯಪಾಲಕ ಅಭಿಯಂತ ಹಾಗೂ ಸಹಜ ಸ್ಥಿತಿ ಯೋಗ ಸತ್ಸಂಗದ ಬಳಗದ ಜಿಲ್ಲಾ ಸಂಚಾಲಕ ರಾಜಶೇಖರ ಪಾಟೀಲ ಅವರು ಮಾತನಾಡಿ ಕ್ಯಾನ್ಸರ್ ರೋಗವನ್ನು ಧೈರ್ಯದಿಂದ ಎದುರಿಸಬೇಕು ಹಾಗೂ ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ರೋಗ ಮುಕ್ತವಾಗಿರಿಸಲು ಪ್ರತಿನಿತ್ಯ ಧ್ಯಾನ ಮತ್ತು ಪ್ರಾಣಾಯಾಮ ಮಾಡುವುದು ಅವಶ್ಯಕ ಇದೆ ಎಂದು ಹೇಳಿದರು.

Contact Your\'s Advertisement; 9902492681

ಮಾಜಿ ಪಾಲಿಕೆ ಸದಸ್ಯ ಉಮೇಶ ಶೆಟ್ಟಿ ಮಾತನಾಡುತ್ತಾ ಕ್ಯಾನ್ಸರ್ ಪಿಡಿತ ರೋಗಿಗಳ ಆರೈಕೆಗಾಗಿ ಹಗಲಿರುಳು ದುಡಿಯುತ್ತಿರುವ ವೈದ್ಯರ ಸೇವೆಯನ್ನು ಶ್ಲಾಘಿಸಿದರು. ಅಧ್ಯಕ್ಷತೆ ವಹಿಸಿದ ಕಿದ್ವಾಯಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಯಾದ ಡಾ. ಗುರುರಾಜ ದೇಶಪಾಂಡೆ ಅವರು ಮಾತನಾಡಿ ರೋಗಗಳಿಂದ ಮುಕ್ತರಾಗಲು ಆತ್ಮಸ್ಥೆರ್ಯ, ಧೈರ್ಯ ಅತ್ಯಾವಶ್ಯಕ ಮತ್ತು ಸಧೃಡ ಆರೋಗ್ಯಕ್ಕೆ ಯೋಗ ಮಾಡಬೇಕೆಂದು ಹಾಗೂ ಇಂತಹ ಆಧ್ಯಾತ್ಮಿಕ ಸಂಘ-ಸಂಸ್ಥೆಗಳು ತಮ್ಮ ಆಸ್ಪತ್ರೆಯ ಚಟುವಟಿಕೆಗಳಲ್ಲಿ ಕೈ ಜೋಡಿಸಿದ್ದಲ್ಲಿ ಕ್ಯಾನ್ಸರ್ ಪಿಡಿತ ಜನರಿಗೆ ಸಹಕಾರಿಯಾಗುವುದಲ್ಲದೇ, ವೈದ್ಯರಿಗೂ ಕೂಡ ಉತ್ತೇಜನ ನೀಡಿದಂತಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮುಖ್ಯ ಅಥಿತಿಯಾಗಿ ಸಹಜ ಯೋಗ ಸತ್ಸಂಗದ ಕೇಂದ್ರ ಸಂಚಾಲಕ ರಾಜಶೇಖರ ಪಾಟೀಲ, ಶ್ರೀಕಾಂತ ಕುಲಕರ್ಣಿ, ಚಂದ್ರಶೇಖರ ಬಿಜಾಪೂರೆ, ಡಾ.ವಸಂತ ಹರಸೂರು, ಡಾ.ನವಿನ್.ಬಿ, ಡಾ.ಶೃತಿ, ಡಾ.ಮಲ್ಲಿಕಾರ್ಜುನ, ಡಾ. ರಾಮಾಚಾರ್ಯ, ಡಾ. ರಾಹುಲ್ ಸೇರಿದಂತೆ ಸಿಬ್ಬಂದಿ ವರ್ಗದವರು ಇದ್ದರು.

ಸಾಯಂಕಾಲ ಪರಮ ಪೂಜ್ಯ ಶ್ರೀ ಶ್ರೀ ಗುರುದತ್ತ ಗುರೂಜಿ ರವರ 71 ನೇ ಜನ್ಮ ದಿನಾಚರಣೆಯನ್ನು ನಗರದ ಘಾಟಗೆ ಬಡಾವಣೆ (ಜಿ.ಡಿ.ಎ. ಲೇಔಟ)ಯಲ್ಲಿರುವ ಗುರುದತ್ತ ಧ್ಯಾನ ಮಂದಿರದಲ್ಲಿ ಎಲ್ಲಾ ಸತ್ಸಂಗಿಗಳು ಧ್ಯಾನ, ಪ್ರಾಣಾಯಾಮ ಮತ್ತು ಭಜನೆ ಮಾಡುವ ಮೂಲಕ ಆಚರಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here