ಕಲಬುರಗಿ: ಇಲ್ಲಿನ ಕಮಲಾಪುರ ತಾಲ್ಲೂಕು ವ್ಯಾಪ್ತಿಯ ನಾವದಗಿ ಗ್ರಾಮದ ಹತ್ತಿರ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂವರು ಮೃತಪಟ್ಟಿರವ ಘಟನೆ ಮಂಗಳವಾರ ನಡೆದಿದೆ.
ಕಮಲಾಪುರ ತಾಲೂಕಿನ ಗೋಗಿ ತಾಂಡಾ ನಿವಾಸಿಗಳಾದ ದೀಪಕ್ (45), ಯುವರಾಜ್ (17) ಹಾಗೂ ರಾಹುಲ್ (17) ಮೃತಪಟ್ಟ ದುರ್ದೈವಿಗಳು. ದೇವರ ಹರಕೆ ತೀರಿಸಲು ಗೋಗಿ ತಾಂಡಾದಿಂದ ಸಾವಳಗಿ ತಾಂಡಾಕ್ಕೆ ಕುಟುಂಬಸ್ಥರು ಕ್ರೂಸರ್ನಲ್ಲಿ ತೆರಳಿದರು. ಮೂವರು ಬೈಕ್ ಮೇಲೆ ತೆರಳುತ್ತಿದ ವೇಳೆ ಘಟನೆ ನಡೆದಿದೆ.
ಘಟನಾ ಸ್ಥಳಕ್ಕೆ ಮಹಾಗಾಂವ್ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.