ಆಳಂದ: ಕನಕ ಜಯಂತಿ ಸಮಿತಿ ವತಿಯಿಂದ ರವಿವಾರ ಕನಕದಾಸ ಮೂರ್ತಿಯ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಬೆಳಿಗ್ಗೆ ಪಟ್ಟಣದ ಹೊರವಲಯದಲ್ಲಿ ಬೈಕ್ ರ್ಯಾಲಿಯ ಮೂಲಕ ಸಮಾಜದ ಯುವ ಮುಖಂಡರು ಹಾಲುಮತದ ಪುಜ್ಯರಾದ ಹುಲಜಂತಿ ಮಾಳಿಂಗರಾಯ ಮಹಾರಾಜರು ಸ್ವಾಗತಿಸಿದರು.
ನಂತರ ಕನಕ ಭವನದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು.ಪಟ್ಟಣದ ಕನಕ ಭವನದಿಂದ ಆರಂಭವಾದ ಮೆರವಣಿಗೆ,ಸಂಗೋಳ್ಳಿ ರಾಯಣ್ಣ ವೃತ್ತ,ಹಳೆ ತಹಸಿಲ್ ಕಚೇರಿ,ಶ್ರೀ ರಾಮ ಮಾರುಕಟ್ಟೆ ಮೂಲಕ ಸಾಗಿತು.
ಸಮಾಜದ ಮುಖಂಡರು ಸೇರಿದಂತೆ ಮತ್ತಿತರರು ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದರು.ಸಂಗೊಳ್ಳಿ ರಾಯಣ್ಣ ಮುರ್ತಿ ಮೆರವಣಿಗೆಯಲ್ಲಿ ಗಮನ ಸೆಳೆಯಿತು.ಬಿಗಿ ಪೋಲಿಸ್ ಬಂದೋಬಸ್ತ್ ಇತ್ತು.