ಕಲಬುರಗಿ: ಪ್ರತಿ ವರ್ಷದಂತೆ ಕೂಡಾ ಈ ವರ್ಷವು ವಿಧಾನ ಪರಿಷತ ಮಾಜಿ ಮುಖ್ಯ ಸಚೇತಕರಾದ ವಿಠ್ಠಲ ಹೇರೂರ ಅವರ 9 ನೇ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮವನ್ನು ದೇವಲ ಗಾಣಗಾಪೂರದ ಹೇರೂರ ಶಕ್ತಿ ಕೇಂದ್ರದಲ್ಲಿ ಜರುಗುವದು ಎಂದು ಗುರುನಾಥ ಹೇರೂರ ಅವರು ತಿಳಿಸಿದ್ದಾರೆ.
ಅಂದು ಬೆಳಗಿನ ಜಾವ 8 ಗಂಟೆಗೆ ಶ್ರೀ ಸಿದ್ಧರಾಮ ಶಿವಾಚಾರ್ಯರು, ಮಹಾಂತೇಶ್ವರ ಮಠ ಚಿನ್ಮಯಗಿರಿ ಶ್ರೀಗಳಿಂದ ಪೂಜಾ ಕಾರ್ಯ ಜರುಗುವುದು ಸಾಯಂಕಾಲ ನಾಡಿನ ಕಲಾವಿದರಿಂದ ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ನೆರವೇರುವವು. ವಿಠ್ಠಲ ಹೇರೂರ ಅವರ ಮೂರ್ತಿ ಅನಾವರಣ ಕಾರ್ಯಕ್ರಮವು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು, ಶೀಘ್ರದಲ್ಲಿ ಅತ್ಯಂತ ಅದ್ದೂರಿಯಾಗಿ ನೆರವೇರಲಿದ್ದು, ಹೇರೂರಜಿಯವರ ಅಭಿಮಾನಿಗಳು ಬಂಧು ಮಿತ್ರರು ಸಹಕರಿಸಬೇಕೆಂದು ಗುರುನಾಥ ಹೇರೂರ ಅವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.