ಚಿಂಚೋಳಿ–ಸೇಡಂ ರಸ್ತೆ ದುರಸ್ತಿಗೆ ಆಗ್ರಹ

0
21

ಚಿಂಚೋಳಿ; ತಾಲೂಕಿನ ಸುಲೇಪೇಟ ಗ್ರಾಮದ  ಸೇಡಂ ಹೆದ್ದಾರಿ ರಸ್ತೆಯಲ್ಲಿರುವ ಮರುಗುತ್ತಿ ಅಂಗಡಿಯ ಮುಂದೆ ಇರುವ ರಸ್ತೆ ಹದಗೇಟ್ಟಿರುದಲ್ಲದೆ ಬೃಹತ ತೆಗ್ಗು ಗುಂಡಿಗಳು ನಿರ್ಮಾಣವಾಗಿದೆ ಕೊಡಲೇ ಅಧಿಕಾರಿಗಳು ಎಚ್ಚೇತ್ತುಕೊಂಡು ರಸ್ತೆ ದುರಸ್ತಿ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಸಂತೋಷ ಜಾಬೀನ್ ಒತ್ತಾಯಿಸಿದ್ದಾರೆ.

ಚಿಂಚೋಳಿ ಸೇಡಂ ರಸ್ತೆಯ ನಿಡಗುಂದ ಶಿರೋಳಿ ಸಟಪಟನಹಳ್ಳಿಯಲ್ಲಿ ಸಮೀಪದಲ್ಲಿಯು ರಸ್ತೆ ಹದಗೇಟ್ಟಿದೆ ಈ ಕುರಿತು ಸಂಭಂದಪಟ್ಟ ಶಾಸಕ ಅಧೀಕಾರಿಗಳ ಗಮನಕ್ಕೆ ಇದ್ದರೂ ಸಹ ನಿರ್ಲಕ್ಷಿಸುತ್ತಿದ್ದಾರೆ ದುರಸ್ತಿ ಕ್ಯಾರೆ ಎನುತ್ತಿಲ್ಲವೆಂದು ಆರೋಪಿಸಿದ್ದಾರೆ,ನಿತ್ಯ ಬೈಕ್ ಸವಾರರು ವಾಹನ ಸವಾರರು ಸಂಚಾರಕ್ಕೆ ಸಂಕಟ ಎದುರಿಸುತ್ತಿದ್ದಾರೆ.

Contact Your\'s Advertisement; 9902492681

ವಿದ್ಯಾರ್ಥಿಗಳು ಶಾಲೆ ಕಾಲೇಜಿಗಳಿಗೆ ಹೋಗಬೇಕಾದರೆ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೆ ತುರ್ತು ಪರಿಸ್ಥಿಯಲ್ಲಿ ಆಸ್ಪತ್ರೆಗೆ ತೆರಳಬೇಕಿರುವ ಗರ್ಭಿಣಿಯರು ರೋಗಿಗಳಿಗೆ ಸಂಕಟವಾಗಿದೆ ರಸ್ತೆಯ ದುಸ್ತಿತಿಯ  ಕುರಿತು ಹಲವಾರು ಬಾರಿ  ಶಾಸಕರಿಗೆ ಸಂಭಂದಪಟ್ಟ ಅಧಿಕಾರಿಗಳಿಗೆ  ಸಾರ್ವಜನಿಕರು ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕಾಟಚಾರಕ್ಕೆ ಗುಂಡಿಗಳು ಮುಚ್ಚಿದರೆ ಮತ್ತೆ ಗುಂಡಿಗಳು ನಿರ್ಮಾಣವಾಗುತ್ತೀದೆ ಇದರಿಂದ ನಾಗರಿಕರು ಹಿಡಿಶಾಪ ಹಾಕುತ್ತಿದ್ದಾರೆ. ರಾತ್ರಿಯಾದರೆ ಸಾಕು ಈ ಮಾರ್ಗದಲ್ಲಿ ನಿತ್ಯ ಜೀವ ಕೈಯಲಿ ಹೀಡಿದುಕೊಂಡು ಸಂಚರಿಸುವಂತಾಗಿರುವುದರಿಂದ ಇನ್ನಾದರೂ ಅಧಿಕಾರಿಗಳು ಎಚ್ಚೇತ್ತಿಕೊಂಡು ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಹದಗೇಟ್ಟ ರಸ್ತೆಯಿಂದ ಗುಂಡಿ ನಿರ್ಮಾಣ ಗಂಭಿರವಾಗಿ ಪರಿಗಣಿಸಿ ದುರಸ್ತಿಗೆ ಮುಂದಾಬೇಕೆಂದು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here