ಸುರಪುರ:ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಬಿ.ಎಲ್.ಓಗಳ ಸಭೆ

0
6

ಸುರಪುರ: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ಸುರಪುರ ಹಾಗೂ ಹುಣಸಗಿ ತಾಲೂಕಿನ ಬಿಎಲ್‍ಓಗಳ ಸಭೆಯನ್ನು ನಡೆಸಲಾಯಿತು.ಜಿಲ್ಲಾಧಿಕಾರಿಗಳ ಕಚೇರಿಯ ಚುನಾವಣಾ ವಿಭಾಗದ ತಹಸೀಲ್ದಾರ್ ಸಂತೋಷಿರಾಣಿಯವರು ಎಲ್ಲಾ ಬಿಎಲ್‍ಓಗಳ ಮೊಬೈಲ್ ಸಂಖ್ಯೆಯನ್ನು ಪರೀಕ್ಷಿಸಿದರು.

ಅಲ್ಲದೆ ಗರುಡಾ ಯಾಪ್‍ಲ್ಲಿ ಸರಿಯಾದ ಮಾಹಿತಿ ತುಂಬುವ ಕುರಿತು,ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಮಾಹಿತಿಯನ್ನು ನೀಡಿ ಮೃತರ ಹೆಸರುಗಳ ತೆಗೆಯುವ,ನೂತನ ಹೆಸರುಗಳ ಸೇರ್ಪಡೆಗೊಳಿಸುವ ಸೇರಿದಂತೆ ಎಲ್ಲಾ ಸಮಸ್ಯೆಗಳನ್ನು ನಿವಾರಿಸಲು ಕ್ರಮವಹಿಸುವಂತೆ ಸಲಹೆ ನೀಡಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಸುರಪುರ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ,ಹುಣಸಗಿ ತಹಸೀಲ್ದಾರ್ ಜಗದೀಶ ಚೌರ್ ಹಾಗೂ ತಹಸೀಲ್ ಕಚೇರಿಯ ಸಿಬ್ಬಂದಿಗಳು ಹಾಗೂ ನೂರಾರು ಜನ ಬಿಎಲ್‍ಓಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here