ಸಿದ್ನಾಳದಲ್ಲಿ ಮೌಢ್ಯ ವಿರೋಧಿ ದಿನ

0
30

ಜೇವರ್ಗಿ: ತಾಲ್ಲೂಕಿನ ಸಿದ್ನಾಳ ಗ್ರಾಮದಲ್ಲಿ ವಿಶ್ವರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66ನೇ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಡಿ.06ರಂದು ಸಾಯಂಕಾಲ 6ಗಂಟೆಗೆ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಮೌಢ್ಯ ವಿರೋಧಿ ಮತ್ತು ಸಮಾಜ ಪರಿವರ್ತನ ದಿನವನ್ನಾಗಿ ಆಚರಿಸಲಾಗುತ್ತಿದೆ.

ಕಾರ್ಯಕ್ರಮದ ಸಾನಿಧ್ಯವನ್ನು ಅಂಕಲಗಾ ಹಿರೇಮಠದ ಅಭಿನವ ಗುರುಬಸವ ಶಿವಾಚಾರ್ಯರು ವಹಿಸಲಿದ್ದಾರೆ. ನೆಲೋಗಿ ಪಿಎಸ್‍ಐ ಗೌತಮ್ ಗುತ್ತೇದಾರ ಉದ್ಘಾಟಿಸುವರು. ಮುಖ್ಯ ಭಾಷಣಕಾರರಾಗಿ ಉಪನ್ಯಾಸಕ ನಿಜಲಿಂಗ ದೊಡ್ಮನಿ ಆಗಮಿಸುವರು. ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರತಾಪ ಕಟ್ಟಿ ವಹಿಸುವರು. ತಾಲ್ಲೂಕಿನ ದಲಿತ ಬಾಂಧವರು, ಹಿತೈಸಿಗಳು ಆಗಮಿಸುವಂತೆ ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here