ಕಸಾಪ: ಮಹಾಪರಿನಿರ್ವಾಣ ದಿನ |`ಮೌಢ್ಯ ಮೀರಿದ ನಡೆ ನಮ್ಮದಾಗಲಿ’ ವಿಶೇಷ ಕಾರ್ಯಕ್ರಮ

0
55

ಕಲಬುರಗಿ: ಸಮಾಜಕ್ಕೆ ಮಾನವೀಯ ಮೌಲ್ಯಗಳ:ನ್ನು ಕಾಲಕಾಲಕ್ಕೆ ಬಿತ್ತರಿಸಿ, ಮೂಢನಂಬಿಕೆ, ಕಂದಾಚಾರಗಳಿಮದ ಕಂಗೆಟ್ಟ ಜನತೆಗೆ ಪ್ರೀತಿ-ಸ್ನೇಹಗಳ ಸಿಂಚನ ಮಾಡಿದವರು ಬುದ್ಧ, ಬಸವ ಹಾಗೂ ಡಾ. ಅಂಬೇಡ್ಕರ್ ಅವರಾಗಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಸುವರ್ಣ ಸಭಾ ಭವನದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಹಾ ಪರಿನಿರ್ವಾಣ ದಿನದಂಗವಾಗಿ `ಮೌಢ್ಯ ಮೀರಿದ ನಡೆ ನಮ್ಮದಾಗಲಿ’ ವಿಶೇಷ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಅವರು, ಡಾ. ಬಿ.ಆರ್.ಅಂಬೇಡ್ಕರ್ ಅವರು ಕೇವಲ ದಲಿತರ ಪರ ಮಾತ್ರವಲ್ಲ, ಬದಲಾಗಿ ಎಲ್ಲ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗೆ ಆಲೋಚನೆ ಮಾಡಿದ ಶ್ರೇಷ್ಠ ಸಮಾಜ ಚಿಂತಕ. ಹಾಗಾಗಿ ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಆಳವಡಿಸಿಕೊಳ್ಳಬೇಕಾಗಿದೆ ಎಂದು ಮಾರ್ಮಿಕವಾಗಿ ಹೇಳಿದರು.

Contact Your\'s Advertisement; 9902492681

ನ್ಯಾಯವಾದಿಗಳಾದ ಮಲ್ಲಿಕಾರ್ಜುನ ಕೋಟೆ ಹಾಗೂ ವಿನೋದ ಜೇನವೇರಿ ಮಾತನಾಡಿ, ಸಾಮಾಜಿಕ ನ್ಯಾಯ, ಸಮ ಸಮಾಜದ ಪ್ರತಿಪಾದನೆಯ ಮೂಲಕ ಎಲ್ಲರಿಗೂ ಸಮಾನವಾದ ಹಕ್ಕುಗಳನ್ನು ಕಲ್ಪಿಸಲು ಶ್ರಮಿಸಿದಜಗತ್ತಿನ ಶ್ರೇಷ್ಠ ಸಾಮಾಜಿಕ ಚಿಂತಕ ಡಾ. ಅಂಬೇಡ್ಕರ್ ಅವರು. ಬಡತನದಲ್ಲಿ ಹುಟ್ಟಿ ಅನೇಕ ಶೋಷಣೆ, ದೌರ್ಜನ್ಯಗಳನ್ನು ಅನುಭವಿಸಿ ಶೋಷಿತರ ಪರವಾಗಿ ದನಿ ಎತ್ತಿದ ಮಹಾನ್ ನಾಯಕರಾದವರು ಡಾ.ಅಂಬೇಡ್ಕರ್ ಅವರು ಎಂದು ಹೇಳಿದರು.

ನಿವೃತ್ತ ಇಂಜಿನೀಯರ್ ಹಣಮಂತರೆಡ್ಡಿ, ಜಿಲ್ಲಾ ಕಸಾಪ ದ ರವೀಂದ್ರಕುಮಾರ ಭಂಟನಳ್ಳಿ, ಶರಣರಾಜ ಛಪ್ಪರಬಂದಿ, ರಾಜೇಂದ್ರ ಮಾಡಬೂಳ, ಮಂದಾಕಿನಿ ಪೂಜಾರಿ, ಪದ್ಮಾವತಿ ನಾಯಕ, ಸಂತೋಷ ಕುಡಳ್ಳಿ ಕಾಳಗಿ, ಗಣೇಶ ಚಿನ್ನಾಕಾರ, ಸಿದ್ಧಾರಾಮ ಹಂಚನಾಳ, ಅಂಬಾರಾಯ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here