ಡಿಸೇಂಬರ್ 11 ರಂದು ಪಾಲಿಕೆಯ ಪೌರಕಾರ್ಮಿಕರಿಗೆ ಸನ್ಮಾನ

0
82

ಕಲಬುರಗಿ : ಮಹಾಜನ ಫೌಂಡೇಶನ ಚಾರಿಟೇಬಲ್ ಮತ್ತು ವೆಲ್‍ಫೇರ್ ಟ್ರಸ್ಟ್ ವತಿಯಿಂದ ಮಹಾನಗರ ಪಾಲಿಕೆಯ ಸ್ವಚ್ಛತಾ ಪೌರಕಾರ್ಮಿಕರಿಗೆ ಗೌರವ ಸನ್ಮಾನ ಆಯೋಜಿಸಿದೆ.

ಮಹಾಜನ ಫೌಂಡೇಶನ್ ವತಿಯಿಂದ ನವೆಂಬರ್ 11 ರಂದು ಸ್ವಚ್ಛತಾ ಪೌರಕಾರ್ಮಿಕರಿಗೆ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಅಂದು ಸಂಜೆ 4 ಗಂಟೆಗೆ ನೆಹರುಗಂಜ್‍ನಲ್ಲಿರುವ ಲಾಹೋಟ ಕಲ್ಯಾಣ ಮಂಟಪದಲ್ಲಿ ಸಮಾರಂಭ ನಡೆಯಲಿದೆ.

Contact Your\'s Advertisement; 9902492681

ಈ ಅಪೂರ್ವ ಸಮಾರಂಭದ ಯಶಸ್ವಿಗಾಗಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಜಯಕುಮಾರ ಹಳಕಟ ಅಧ್ಯಕ್ಷತೆಯಲ್ಲಿ ಸ್ವಾಗತ ಸಮಿತಿ ಹಾಗೂ ಗ್ರಾಮಾಂತರ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ತೆಗನೂರ ಅಧ್ಯಕ್ಷತೆಯಲ್ಲಿ ಪ್ರಚಾರ ಸಮಿತಿ ರಚಿಸಲಾಗಿದೆ. ಬಿಜೆಪಿ ಮುಖಂಡ ವೀರುಸ್ವಾಮಿ ನರೋಣಾ ಮತ್ತು ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಭಾಗೀರಥಿ ಗುನ್ನಾಪುರ ಅವರನ್ನು ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ಹಾಗೂ ಕಲ್ಯಾಣರಾವ ಮಳಖೇಡ, ಪ್ರಭುಲಿಂಗ ಪಾಟೀಲ್ ಹಾದಿಮನಿ, ಶಿವಾನಂದ ಅಷ್ಟಗಿ, ಅಂಬಾರಾಯ ಜಿ ಬೆಳಕೋಟಾ, ವೀರಭದ್ರಪ್ಪ ( ಅಪ್ಪು ) ಆಸಪಲ್ಲಿ ಕೆ.ಸಿ. ಪಾಟೀಲ್, ಕಾಶಿನಾಥ ಚವ್ಹಾಣ, ಶಿವರಾಜ ಸಜ್ಜನ ಅವರನ್ನು ಉಪಾಧ್ಯಕ್ಷರನ್ನಾಗಿ ಮಾದ ನೇಮಿಸಲಾಗಿದೆ.

ಕಾಪೆರ್Çೀರೇಟರ್ ಆರ್.ಎಸ್.ಪಾಟೀಲ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಲ್ಲಿಕಾರ್ಜುನ ಜಿ. ಹೊನ್ನ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ. ಪ್ರಚಾರ ಸಮಿತಿ ಕಾರ್ಯಾಧ್ಯಕ್ಷರನ್ನಾಗಿ ವಿಶ್ವನಾಥ ಪಾಟೀಲ್ ವೆಂಕಟಬೆನ್ನೂರ, ಉಪಾಧ್ಯಕ್ಷರನ್ನಾಗಿ ಶರಣು ಗೊಬ್ಬರ, ಅರುಣಕುಮಾರ ಡೋಣಿ, ಪ್ರಭಾಕರ ರಾವೂರ ರಾಜಕುಮಾರ ಮಂಠಾಳೆ ಹಾಗೂ ಕಾರ್ಯದರ್ಶಿಯನ್ನಾಗಿ ರವಿ ದೇಗಾಂವ ಅವರನ್ನು ನೇಮಿಸಲಾಗಿದೆ.

ಸಮಾಜ ಸೇವಕ ಅನುಪ ಸಲಗ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಎಂದು ಬಿಜೆಪಿ ಮುಖಂಡರೂ ಆಗಿರುವ ಮಹಾಜನ ಫೌಂಡೇಶನ್ ಅಧ್ಯಕ್ಷ ಶಿವಕಾಂತ ಸಿ.ಮಹಾಜನ್ ಹಾಗೂ ಕಾರ್ಯದರ್ಶಿ ಈಶ್ವರ ರಾಜ ಎಸ್. ಗುಂಡಗುರ್ತಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here