ಸೇವೆಯ ಮನೋಭಾವ ದೊಡ್ಡಪ್ಪಗೌಡರಲ್ಲಿದೆ: ಶಖಾಪುರ ಶ್ರೀ

0
382

ಜೇವರ್ಗಿ: ಜನರ ಸೇವೆ ಮಾಡುವ ಮನೋಭಾವ ದೊಡ್ಡಪ್ಪಗೌಡರಲ್ಲಿದ್ದುˌ ದೇವರು ಅವರಿಗೆ ಆರೋಗ್ಯ ಮತ್ತು ಆಯುಷ್ಯ ನೀಡಲಿ ಎಂದು ಶಖಾಪುರದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹಾರೈಸಿದರು.

ಪಟ್ಟಣದ ದೇವರಮನಿ ಲೇಔಟ್ ಆಯೋಜಿಸಿದ್ದ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅವರ 50ನೇ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

Contact Your\'s Advertisement; 9902492681

ಇಡೀ ತಾಲ್ಲೂಕಿನ ಜನರ
ಪೀತಿಗೆ ಪಾತ್ರರಾಗಿರುವ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲರು ಸರಳ ವ್ಯಕ್ತಿತ್ವದವರು. ಸಾಮಾನ್ಯರ ಕಷ್ಟದಲ್ಲಿ ಭಾಗಿಯಾಗುವ ಗುಣ ಅವರ ತಂದೆಯವರಿಂದ ಬಳುವಳಿಯಾಗಿ ಬಂದಿದೆ ಎಂದರು.

ಸುರಪುರ ಶಾಸಕ ರಾಜುಗೌಡ ಮಾತನಾಡಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲರ 50ನೇ ಜನ್ಮದಿನೋತ್ಸವಕ್ಕೆ ತಾಲ್ಲೂಕಿನ ಅಭಿವ್ರದ್ಧಿಗೆ 50ಕೋಟಿ ರೂ. ನೀಡಲಾಗುವುದು ಎಂದು ಘೋಷಿಸಿದರು.

ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಮಾತನಾಡಿˌ ಜೇವರ್ಗಿ ಜನತೆಯ ಸೇವೆಯಲ್ಲಿ ನಾನು ಯಾವಾಗಲು ಬದ್ಧನಾಗಿರುತ್ತೇನೆ. ಈ ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಚಿರಋಣಿ ಎಂದರು.

ನಮ್ಮ ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ನಮ್ಮ ಕುಟುಂಬ ಯಾವಾಗಲು ಜನರ ಸೇವೆಗೆ ಬದ್ಧರಾಗಿದ್ದೇವೆ ಎಂದು ಹೇಳಿದರು.

ಸೊನ್ನ ಮಠದ ಶಿವಾನಂದ ಸ್ವಾಮಿಜೀ, ನೆಲೋಗಿ ಮಠದ ಸಿದ್ದಲಿಂಗ ಸ್ವಾಮಿಜೀˌ ಶಾಖಾಪುರ ತಪೋವನ ಮಠದ ಸಿದ್ದರಾಮ ಶಿವಾಚಾರ್ಯ, ಯಡ್ರಾಮಿ ಮಠದ ಸಿದ್ದಲಿಂಗ ಸ್ವಾಮೀಜಿ, ಜೇರಟಗಿಯ ಮಹಾಂತ ಮಹಾಸ್ವಾಮೀಜಿ, ಆಂದೋಲಾದ ಸಿದ್ದಲಿಂಗ ಸ್ವಾಮೀಜಿˌ ಆಲೂರದ ಕೆಂಚ ಬಸವೇಶ್ವರ ಶಿವಾಚಾರ್ಯ, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್, ಸುರಪುರ ಶಾಸಕ ರಾಜುಗೌಡˌ ವಿಧಾನ ಪರಿಷತ್ ಬಿ.ಜಿ ಪಾಟೀಲ್ˌ ಅಮರನಾಥ ಪಾಟೀಲˌ ಸದಸ್ಯ ಶೋಭಾ ಭಾಣಿ, ಸುರೇಶ ಸಜ್ಜನ್ˌ ಶರಣಪ್ಪ ತಳವಾರ, ಮಲಿನಾಥಗೌಡ ಪಾಟೀಲ ಯಲಗೋಡˌ ಶಿವರಾಜ್ ಪಾಟೀಲ್ ರದ್ದೇವಾಡಗಿˌ ಅಶೋಕ ಸಾಹು ಗೋಗಿ, ಮರೆಪ್ಪ ಬಡಿಗೇರ ಸೇರಿದಂತೆ ವಿವಿಧ ಮಠದ 21 ಸ್ವಾಮೀಜಿಗಳು ಆಗಮಿಸಿದ್ದರು.

ಉಡಿ ತುಂಬುವ ಕಾರ್ಯಕ್ರಮ: ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ 5 ಸಾವಿರ ಮಹಿಳೆಯರಿಗೆ ಉಡಿ ತುಂಬಲಾಯಿತು.

ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನ:
SSLC ಯಲ್ಲಿ ಹಾಗೂ PUC ಯಲ್ಲಿ ಹೆಚ್ಚಿನ ಅಂಕಗಳು ಪಡೆದ ವಿದ್ಯಾರ್ಥಿಗಳಿಗೆˌ ಪೌರ ಕಾರ್ಮಿಕರಿಗೆˌ ಸೈನಿಕರಿಗೆˌ ಮಾಜಿ ಸೈನಿಕರಿಗೆ ಹಾಗೂ ಹೆರಿಗೆ ಮಾಡಿಸಿದ ಸೂಲಗಿತ್ತಿಯರಿಗೆ ಸನ್ಮಾನಿಸಲಾಯಿತು.

ಕ್ರಷಿ ಪರಿಕರ ವಿತರಣೆ: ತಾಲ್ಲೂಕಿನ 50ರೈತರಿಗೆ ಪವರ್ ಸ್ರ್ಪೇ ವಿತರಣೆ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here