ಅಳಂದ: ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ದಿ.ಎ.ವಿ.ಪಾಟೀಲ್ ಅವರ ಪುಣ್ಯಸ್ಮರಣೆಯನ್ನು ಪಕ್ಷದ ಕಛೇರಿ,ಉದ್ಘಾಟನೆ, ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಶನಿವಾರ ನಡೆಯಿತು.
ನಾಯಕಿ ಮಹೇಶ್ವರಿ ವಾಲಿ ಮಾತನಾಡಿ,ಅಧಿಕಾರಕ್ಕೆ ಬಂದರೆ ಅಣ್ಣಾರಾವ ಪಾಟೀಲ್ ಅವರ ಪುತ್ತಳ್ಳಿ ನಿರ್ಮಾಣ ಮಾಡಲಾಗುವುದು. ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಹೇಳಿದರು.
ಮುಂಬರುವ ಜನೆವರಿ ತಿಂಗಳಿನಲ್ಲಿ ಆಳಂದನಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯ ಮಾಡುವರು ಎಂದು ಇದೇ ವೇಳೆಯಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು,ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.