ಕನ್ನಡ ರಾಜ್ಯೋತ್ಸವದ ಅಂಗವಾಗಿ ಎರಡನೇ ದಿನ ನಾಟಕ ಪ್ರದರ್ಶನ

0
19

ಕಲಬುರಗಿ: ನಗರದ ಎಸ್ಎಂ ಪಂಡಿತ್ ರಂಗ ಮಂದಿರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆರ್ಟ್ ಥೀಯೇಟರ್  ಅಂತರಂಗ ರಂಗ ಸಂಸ್ಥೆ ಜನಪ್ರಿಯ ಜನಪ್ರಿಯ ಕಲಾಸಂಘ ಸೂರ್ಯನಗುಡಿ ಕಲಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಾಲ್ಕು ದಿನಗಳ ನಾಲ್ಕು ದಿನಗಳ ನಾಟಕೋತ್ಸವ ಎರಡನೇ ದಿನದ ನಾಟಕ ಪ್ರದರ್ಶನವನ್ನು ನಿವೃತ್ತ ಪ್ರಾಂಶುಪಾಲರಾದ  ಬಸವರಾಜ ಗಾನೂರೆಯವರು ಉದ್ಘಾಟನೆ ಮಾಡಿದರು.

ಅದುನಿಕತೆ ತಂತ್ರಜ್ಞಾನ ಮೊಬೈಲ್ ಬಳಕೆಯಲ್ಲಿ ಮನರಂಜನೆ ಹತ್ತಿರವಾಗಿದರಿಂದ ರಂಗ ಭೂಮಿಗೆ ಪ್ರೋಸ್ತಹ ಕಡಿಮೆ ಯಾಗುತ್ತದೆ ಆದರೂ ಸಹ ಸಿನಿಮಾ ಕ್ಷೇತ್ರದಲ್ಲಿ ರಂಗ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಇದೆ ಹಾಗಂತ ಎಲ್ಲರೂ ಸಿನಿಮಾ ಕ್ಷೇತ್ರದಲ್ಲಿ ಅವಕಾಶ ಸಿಗುವುದು ಅಪರೂಪ ಉಳಿದವರು ಮತ್ತು ರಂಗ ಭೂಮಿಯೆ ಅವರಿಗೇ ಜೀವನ ಆಧಾರವಾಗಿದೆ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅನಿವಾರ್ಯತೆ ಇದೆ  ಶಾಲಾ ,ಕಾಲೇಜು ಕ್ಯಾಂಪಸನಲ್ಲಿ ಮಕ್ಕಳಿಗೆ ಕಲಿಕೆಯ ಜೊತೆಗೆ ರಂಗ ಚಟವಟಿಕೆಗಳನ್ನು ತೊಡಗಿಸಿ ರಂಗ ಕಲಾವಿದರಿಗೆ ಅವಕಾಶ ನೀಡಬೇಕು ಎಂದರು.

Contact Your\'s Advertisement; 9902492681

ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ರಂಗ ಸಮಾಜದ ಮಾಜಿ ಸದಸ್ಯರಾದ ಸುಜಾತ ಜಂಗಮ ಶೆಟ್ಟಿ ಯವರು ಮಾತಾಡಿ ಮಹಾಕಾವ್ಯಗಳನ್ನು ಹಳ್ಳಿಗಳಿಗೆ ತಲುಪಿಸಿದ್ದು ರಂಗಭೂಮಿ. ನಾಟಕಗಳ ಮೂಲಕ ರಾಮಾಯಣ, ಮಹಾಭಾರತದಂತ ಮಹಾಕಾವ್ಯಗಳನ್ನು ಗ್ರಾಮೀಣ ಮಟ್ಟದಲ್ಲಿ ತಲುಪಿಸಿದ ಕೀರ್ತಿ ರಂಗಕ್ಷೇತ್ರಕ್ಕೆ ಸಲ್ಲುತ್ತದೆ ಎಂದರು.

ಇದೆ ಸಂದರ್ಬದಲ್ಲಿ  ಪ್ರಭುಲಿಂಗ ನೀಲುರೆ ನಾಟಕ ರಚನಕಾರರು.  ಶಾಂತಲಿಂಗ ಮಠಪತಿ ರಂಗ ನಿರ್ದೇಶಕರು ಕುಮಾರಿ ವಿಜಯಲಕ್ಷ್ಮಿ ದೊಡ್ಮನಿ, ರಾಘವೇಂದ್ರ ಹಳಪೇಟ ಇವರಿಗೆ ರಂಗ ಗೌರವ ನೀಡಿ ಸನ್ಮಾನಿಸಲಾಯಿತು. ವೇದಿಕೆ ಮೇಲೆ ವಿಶ್ವನಾಥ್ ಹೊಸಮನಿ ಉಪನ್ಯಾಸಕರು. ವಿಠ್ಠಲ ಚಿಕಣಿ ಸಂಸ್ಕಾರ ಪ್ರತಿಷ್ಠಾನ ಅಧ್ಯಕ್ಷ ಸುರೇಶ್ ಬಡಿಗೇರ್ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಸದಸ್ಯ, ಅಂಬೇಡ್ಕರ್  ವಸತಿ ನಿಲಯ ಮೇಲ್ವಿಚಾರಕರಾದ ಸಂತೋಷ್ ಸರಡಗಿ ಇದ್ದರು.

ನಾಗರಾಜ ಗೋಗಿ ಸ್ವಾಗತಿಸಿದರು. ಎಸ್ ಬಿ ಹರಿಕೃಷ್ಣ ವಂದಿಸಿದರು. ಕಾರ್ಯಕ್ರಮ ನಿರ್ವಹಣೆಯನ್ನು ಆಯೋಜಕರಾದ ಸುನಿಲ್ ಮಾರುತಿ ಮಾನಪಡೆ ನಡೆಸಿಕೊಟ್ಟರು. ಇಂದು ದಾತ್ರಿ ರಂಗ ಸಂಸ್ಥೆ ಸಿರಿಗೆರಿಯಿಂದ ಅಕ್ಕ ನಾಗಲಾಂಬಿಕೆ ನಾಟಕ ಪ್ರದರ್ಶನಗೊಂಡಿತ್ತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here