ಮೇದಾರ ಸಮುದಾಯದ ಅಭಿವೃಧ್ಧಿಗೆ ಎಲ್ಲಾ ರೀತಿಯ ನೆರವು

0
13

ಸುರಪುರ:ನಗರದ ಮೇದಾರಗಲ್ಲಿಯ ಬಳಿಯಲ್ಲಿನ ಶಿವಶರಣ ಮೇದಾರ ಕೇತಯ್ಯನವರ ನಾಮಫಲಕದ ಬಳಿಯಲ್ಲಿ ಮೇದಾರ ಕೇತಯ್ಯನವರ ಜಯಂತಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ರಾಜುಗೌಡ ಮಾತನಾಡಿ,ಶಿವಶರಣ ಮೇದಾರ ಕೇತಯ್ಯನವರು ಬಸವಾದಿ ಶರಣರ ಸಮಕಾಲಿನ ಮಹಾನ್ ಶರಣರಾಗಿದ್ದು ಅವರ ವಚನಗಳು ಇಂದಿಗೂ ಎಲ್ಲಿರಿಗೂ ದಾರಿದೀಪವಾಗಿವೆ.ಮೇದಾರ ಸಮಾಜ ಯಾವತ್ತೂ ನನ್ನೊಂದಿಗಿದೆ,ನಾನು ಸಮಾಜದೊಂದಿಗಿದ್ದೇನೆ ಸಮಾಜದ ಅಭಿವೃಧ್ಧಿಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.ಅಲ್ಲದೆ ಶಾಲೆ ನಿರ್ಮಾಣ, ನಿವಾಸಿಗಳ ಬೇಡಿಕೆಯಂತೆ ಶೌಚಾಲಯ ನಿರ್ಮಿಸಿಕೊಡಲಾಗುವುದು.. ಮೇದಾರ ಗಲ್ಲಿಗೆ ಕಮಾನು, ಪಂಚಲೋಹದ ಮೂರ್ತಿಯನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.

Contact Your\'s Advertisement; 9902492681

ಜ.7ರಂದು ಚಿತ್ರದುರ್ಗದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಾರ್ಯಕ್ರಮಕ್ಕೆ ಕರೆತರಲು ಶಕ್ತಿಮೀರಿ ಪ್ರಯತ್ನಿಸುವೆ.ಜೊತೆಗೆ ಇಲ್ಲಿಂದ ಹೋಗುವವರಿಗೆ ವ್ಯವಸ್ಥೆ ಕಲ್ಪಿಸುವೆನು, ಸಮುದಾಯ ಒಗ್ಗಟ್ಟಿನಿಂದ ಇದ್ದಾಗ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ. ಎಸ್‍ಟಿಗಿರುವ ಸೌಲಭ್ಯಗಳನ್ನು ಪ್ರತಿಯೊಬ್ಬರೂ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮೇದಾರ ಸಮಾಜದ ರಾಜ್ಯಾಧ್ಯಕ್ಷ ಸಿ.ಸಿ. ಪಾಟೀಲ್ ಮಾತನಾಡಿ, ಜ. 7ರಂದು ಚಿತ್ರದುರ್ಗದ ಮೇದಾರ ಪೀಠದಲ್ಲಿ ಸಮುದಾಯ ಭವನ ನಿರ್ಮಿಸಲಾಗಿದ್ದು, ರಕ್ಷಣ ಸಚಿವ ರಾಜನಾಥ ಸಿಂಗ್ ಉದ್ಘಾಟಿಸುವರು. ಇಡೀ ದೇಶದಲ್ಲಿರುವ ಮೇದಾರ ಪೀಠ ಏಕೈಕವಾಗಿದ್ದು, ಅಖಿಲ ಭಾರತ ಮೇದಾರ ಪೀಠವೆಂದು ನಾಮಕರಣಗೊಳ್ಳಲಿದೆ. ಶಿವಶರಣ ಕೇತೇಶ್ವರ ದಂಪತಿಯ ಪಂಚಲೋಹ ಪುತ್ಥಳಿ ಸೇರಿದಂತೆ ವಿವಿಧ ನಾಲ್ಕು ಪುತ್ಥಳಿ ಪ್ರತಿಷ್ಠಾಪಿಸಲಾಗುವುದು. ಇಮ್ಮಡಿ ಬಸವ ಮೇದಾರ ಕೇತೇಶ್ವರ ಸೇರಿದಂತೆ ವಿವಿಧ ಹರಚರ ಗುರುಗಳು ಪಾಲ್ಗೊಳ್ಳುವರು. 25111 ಮುತ್ತೈದೆಯರಿಗೆ ಉಡಿತುಂಬಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚಿತ್ರದುರ್ಗ ಸೀಬಾರ ಕೇತೇಶ್ವರ ಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಆಶೀರ್ವಚನ ನೀಡಿದರು. ಉಪನ್ಯಾಸಕ ಡಾ. ನಾಗರಾಜ ಚವಲಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ ತಾತಾ, ನಗರಸಭೆ ವಿರೋಧ ಪಕ್ಷದ ನಾಯಕ ರಾಜಾ ಪಿಡ್ಡ ನಾಯಕ, ನಗರಸಭೆ ಉಪಾಧ್ಯಕ್ಷ ಮಹೇಶ್ ಪಾಟೀಲ್, ಬಿಜೆಪಿ ಮುಖಂಡ ಶಂಕರನಾಯಕ, ನಗರಸಭೆ ಸದಸ್ಯೆ ಸರೋಜ ಬಸವರಾಜ್, ನಾಮನಿರ್ದೇಶಿತ ಸದಸ್ಯೆ ರೇಣುಕಾ ಈರಣ್ಣ, ಶರಣಗೌಡ, ಭೀಮಣ್ಣ ಕುಲಕರ್ಣಿ, ಪ್ರಕಾಶ ಪಾಟೀಲ, ಬಸವರಾಜ ಕೊಡೇಕಲ್, ನರಸಪ್ಪ ಚಾಮನಾಳ, ಕೃಷ್ಣ, ನಾಗಣ್ಣ ಚವಲಕರ್, ಗೋಪಾಲ ಗುತ್ತೇದಾರ, ರಾಘವೇಂದ್ರ ಪೊಲೀಸ್, ದೇವೇಂದ್ರಪ್ಪ ಮಾಸ್ತರ್, ರಾಘವೇಂದ್ರ ಬಾಳೆಕಾಯಿ, ಲಕ್ಷ್ಮಣ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here