ಸುರಪುರ:ಚಿತ್ರನಟ ದರ್ಶನ್ ತೂಗುದೀಪ ಅವರು ಕ್ರಾಂತಿ ಸಿನೆಮಾದ ಪ್ರಚಾರಕ್ಕೆ ಹೊಸಪೇಟೆಗೆ ಆಗಮಿಸಿದಾಗ ಅವರಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿ ನಗರದಲ್ಲಿ ಅಖಿಲ ಕರ್ನಾಟಕ ದರ್ಶನ್ ತೂಗೂದೀಪ ಅಭಿಮಾನಿಗಳ ಸಂಘ ದಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಡಾ:ಬಿ.ಆರ್ ಅಂಬೇಡ್ಕರ್ ವೃತ್ತ ದಿಂದ ತಹಸೀಲ್ದಾರ್ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಕಿಡಿಗೇಡಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.
ನಂತರ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಅನೇಕ ಮುಖಂಡರು ಮಾತನಾಡಿ,ನಟ ದರ್ಶನ್ ಅವರು ಹೊಸಪೇಟೆಯಲ್ಲಿ ಕ್ರಾಂತಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಅವಮಾನಿಸಿದ್ದಲ್ಲದೆ ಚಿತ್ರ ತಂಡದ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.ಈ ಘಟನೆಗೆ ಕಾರಣರಾದವರನ್ನು ಪತ್ತೆ ಹಚ್ಚಿ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು,ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ಸಂಘಟನೆಯಿಂದ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ,ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘದ ಉ.ಕ ಸಹ ಕಾರ್ಯದರ್ಶಿ ಶರಣು ಬೈರಿಮರಡಿ,ತಾಲೂಕು ಅಧ್ಯಕ್ಷ ಮಲ್ಲು ಕಬಾಡಗೇರ,ಮುಖಂಡರಾದ ಮೌನೇಶ ಕಟ್ಟಿಮನಿ,ದೇವು ಪಾಟೀಲ್,ಅಂಬ್ರೇಶ,ಚನ್ನು ದಿವಳಗುಡ್ಡ,ಶ್ರೀಶೈಲ ದಿವಳಗುಡ್ಡ,ಶಿವು ದಿವಳಗುಡ್ಡ,ದೇವು ದೇವರಗೋನಾಲ,ಹಣಮಂತ ರತ್ತಾಳ,ಬಸ್ಸು ರುಕ್ಮಾಪುರ,ದೇವು ಮೆಡಿಕಲ್,ವಿಶಾಲ ಕಟ್ಟಿಮನಿ,ಪ್ರೇಮ್ ಕಟ್ಟಿಮನಿ,ಮರೆಪ್ಪ ದಿವಳಗುಡ್ಡ,ನಿಂಗಪ್ಪ ಬೈರಿಮರಡಿ,ಶರಣು ಹಸನಾಪುರ,ಸಿದ್ರಾಮಪ್ಪ ಬೈರಿಮರಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.