ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಅಗತ್ಯ

0
14

ಕಲಬುರಗಿ: ಇಂದಿನ ಮಕ್ಕಳಲ್ಲಿ ಅಗಾದವಾದ ಪ್ರತಿಭೆ ಇದ್ದು, ಅವರ ಪ್ರತಿಭೆ ಅನಾವರಣಕ್ಕೆ ವೇದಿಕೆ ಹಾಗೂ ಪೆÇ್ರೀತ್ಸಹ ಅತ್ಯಂತ ಅವಶ್ಯಕವಾಗಿದೆ ಎಂದು ಸಾಹಿತಿ ಶರಣಗೌಡ ಪಾಟೀಲ್ ಜೈನಾಪುರ ಹೇಳಿದರು.

ಜೇವರ್ಗಿ ತಾಲೂಕಿನ ಮಂದೆವಾಲ್ ಗ್ರಾಮದ ಹೊಸ ಬಡಾವಣೆಯ ಶಾಲಾ ಆವರಣದಲ್ಲಿ ಸ್ಪಂದನ ಮಹಿಳಾ ಮತ್ತು ಮಕ್ಕಳ ಸೇವಾ ಸಂಸ್ಥೆ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸ್ಪರ್ದಾತ್ಮಕ ಯುಗದಲ್ಲಿರುವ ನಮ್ಮ ಮಕ್ಕಳು ಅತ್ಯಂತ ಹೆಚ್ಚು ಪ್ರತಿಭಾವಂತರಿದ್ದು, ಅವರಿಗೆ ಬರೀ ಪಠ್ಯ ಪುಸ್ತಕದ ಲೋಕಕ್ಕೆ ಸಿಮಿತಗೊಳಿಸದೆ ಅವರಲ್ಲಿರುವ ಪ್ರತಿಭೆ ಗುರುತಿಸಿ ಸಂಗೀತ, ಸಾಹಿತ್ಯ, ಭರತನಾಟ್ಯ, ಚಿತ್ರಕಲೆ, ಕ್ರೀಡೆ ಹಾಗೂ ಬಹುಮುಖವಾಗಿ ಅವರನ್ನು ಪೆÇ್ರೀತ್ಸಾಹಿಸಿ ಬೇಳಿಸಿದಾಗಮಾತ್ರ ನಮ್ಮ ಮಕ್ಕಳು ಸ್ಪರ್ದಾತ್ಮಕವಾಗಿ ಬೇಳೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.

Contact Your\'s Advertisement; 9902492681

ವಿಶೇಷ ಉಪನ್ಯಾಸ ನೀಡಿದ ಯುವ ಸಾಹಿತಿ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಇಂದು ಅನೇಕ ಕನ್ನಡದ ವಾಹಿನಿಗಳೂ ಮಕ್ಕಳಿಗಾಗಿ ವಿಶೇಷ ಕಾರ್ಯಕ್ರಮಗಳು ರೂಪಿಸುತ್ತಿದ್ದು, ಅದರೊಂದಿಗೆ ಸರಕಾರಕೂಡ ಬಾಲವಿಕಾಸ ಅಕಾಡೆಮಿ ಮೂಲಕ ಈ ರೀತಿಯಾದ ಕಾರ್ಯಕ್ರಮಗಳ ಸಂಘಟನೆಗೆ ವಿಶೇಷ ಸಹಕಾರ ನೀಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೇದಿಕೆ ಒದಗಿಸುತ್ತಿರುವುದು ಸಂತಸದ ಸಂಗತಿ ಎಂದು ಹೇಳಿದರು. ಕಾರ್ಯಕ್ರಮವನ್ನು ಜೇವರ್ಗಿ ತಾಲೂಕ ಕ.ಸಾ.ಪ ಗೌರವ ಅಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ ಉದ್ಘಾಟಿಸಿದರು.

ಶಿರಸಗಿ ಭೀಮಾಶಂಕರ ವಿದ್ಯಾಶ್ರಮದ ಬಸವರಾಜ ಶರಣರು ಸಾನಿದ್ಯವಹಿಸಿದ್ದರು, ತಾಲೂಕ ಕ.ಸಾ.ಪ ಅಧ್ಯಕ್ಷ ಎಸ್.ಕೆ ಬಿರಾದರ, ಸಿ.ಡಿ.ಪಿ.ಓ ದೀಪಿಕಾ, ಪ್ರಮುಖರಾದ ಶರಣು ಕನ್ನೆಳ್ಳಿ, ತಮ್ಮಣ ಮುದಗಲ್, ಸತೀಶ ಜಾಗಿರದಾರ, ಎಂ.ಎಸ್. ಚಾಡಿಹಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸ್ಪಂದನಾ ಸಂಸ್ಥೆಯ ಅಧ್ಯಕ್ಷ ಕಾಶೀನಾಥ ಗಾಣಿಗೆರ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿಶೇಷ ಸಾಧನೆಮಾಡಿದ ಕುಮಾರಿ. ಸಮೃದ್ಧಿ, ಭಾಗ್ಯಶ್ರೀ ಹಾಗೂ ಭವಾನಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಮಕ್ಕಳಿಂದ ಜನಪದ ನೃತ್ಯ, ಭರತನಾಟ್ಯ, ಸಮೂಹಗಾಯನ, ಭಾವಗೀತೆ, ಭಕ್ತಿಗೀತೆ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ ಸೇರಿದಂತೆ 30 ಕ್ಕು ಹೆಚ್ಚು ಮಕ್ಕಳ ತಂಡಗಳು ನೀಡಿದ ಪ್ರದರ್ಶನ ಪ್ರೇಕ್ಷಕರ ಗಮನ ಸೇಳೆಯಿತು. ಕಾರ್ಯಕ್ರಮವನ್ನು ಶ್ರೀಶೈಲ ನವಲಿ ನಿರೂಪಿಸಿದರು, ಹಣಮಂತ್ರಯ ದೇವತ್ಕಲ್ ಸ್ವಾಗತಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here