ಕಲಬುರಗಿ: ಜ. 9 ರಿಂದ 13ರವೆಗೆ ಇಲ್ಲಿನ ಚಿತ್ತಾಪುರ ತಾಲ್ಲೂಕಿನ ತರಕಸ್ಪೇಟ ಗ್ರಾಮದ ಹಜರತ್ ಸೈಯದ್ ಶಾಹಪೀರವಲಿ ಮತ್ತು ಗೈಬ್ ಪೀರವಲಿ ದರ್ಗಾದ ಉರುಸ್ ಜರುಗಲಿದೆ ಎಂದು ದರ್ಗಾದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
9 ರಂದು ಹಜರತ್ ಸೈಯದ್ ಶಾಹಪೀರವಲಿ ಮತ್ತು ಗೈಬ್ ಹಜರತ್ ಸೈಯದ್ ಪೀರವಲಿ ದರ್ಗಾದ ಗಂಧದ ಮೆರವಣಿಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯ ವರೆಗೆ ನಡೆಯಲಿದೆ. 10 ರಂದು ದೀಪೋತ್ಸವ ಮತ್ತು ದನಗಳ ಜಾತ್ರೆ ನಡೆಯಲಿದೆ. 11ಕ್ಕೆ ದರ್ಗಾದ ವತಿಯಿಂದ ಕುಸ್ತಿ ಪಂದ್ಯ ನಡೆಯಲಿದ್ದು, ವಿಜೆತ ಕುಸ್ತಿ ಪಟ್ಟುಗಳಿಗೆ ಬೆಳ್ಳಿ ಕಡಗ ಬಹುಮಾನ ಮತ್ತು 65 ಶೇರು ಉಸುಕಿನ ಚೀಲ ಎತ್ತಿದವರಿಗೆ 5ತೊಲಿ ಬೆಳ್ಳಿ ಕಡಗ ಬಹುಮಾನ ನೀಡಲಾಗುತ್ತದೆ.
12 ರಂದು ಜಂಗಿ ಪೈಲ್ವಾನರ ಕುಸ್ತಿ ನಡೆಸಲಾಗುತ್ತಿದೆ ಕುಸ್ತಿ ಪಂದ್ಯಗಳಲ್ಲಿ ಪಾಲ್ಗೊಂಡ ಜಯಗಳಿಸಿದ ಪಟ್ಟುಗಳಿಗೆ ಸನ್ಮಾನ ಮತ್ತು ಬಹುಮಾನ ಇರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.