ಆಳಂದ: ಬಿಜೆಪಿ ಯುವ ಮೋರ್ಚಾ ಆಳಂದ ಮಂಡಲ ವತಿಯಿಂದ ಕದಂಬ ಕಂಪ್ಯೂಟರ ತರಬೇತಿ ಕೇಂದ್ರದಲ್ಲಿ ದಿ.ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಜನುಮ ದಿನದ ಪ್ರಯುಕ್ತ ಪ್ರಬಂಧ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಥಮ ಬಹುಮಾನ ಲಕ್ಷಿ ಶ್ರೀಶೈಲ ಸುತಾರ ದ್ವಿತಿಯ ಬಹುಮಾನ ಸ್ನೇಹಾ ಪೂಜಾರಿ ತೃತಿಯಾ ಬಹುಮಾನ ಭಾಗ್ಯಶ್ರೀ ಭೀಮರಾವ ಹಾಗೂ ಎಲ್ಲಾ ಸ್ಪರ್ಧಾತಿಳಿಗೆ ಸ್ವತಂತ್ರ ಹೋರಾಟಗಾರರ ಪುಸ್ತಕ ಬಹುಮಾನ ವಿತರಿಸಲಾಯಿತು.
ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷಕಾದ ಸುನೀಲ ಹಿರೋಳಿಕರ್ ಆಳಂದ ಮಂಡಲ ಪ್ರಧಾನ ಕಾರ್ಯದರ್ಶಿ ಶರಣು ಕುಮಸಿ ಯುವ ಮೋರ್ಚಾಧ್ಯಕ್ಷರಾದ ಕುಮಾರ ಬಂಡೆ ಉಪಾಧ್ಯಕ್ಷರಾದ ಪ್ರಕಾಶ ತೋಳೆ ಕುಮಾರ ಸ್ವಾಮಿ ಅಮರ ಘಂಟೆ ಮತ್ತಿತರರು ಉಪಸ್ಥಿತರಿದ್ದರು.