ಈ ಸಮಾವೇಶ ಅರ್ಚಕರ ಪುರೋಹಿತರ ಕಲ್ಯಾಣಕ್ಕಾಗಿ ಶ್ರಮಿಸುವ ನಾಂದಿಗೀತೆಯಾಗಲಿ

0
32

ಕಲಬುರಗಿ: ಜಿಲ್ಲೆಯ ಗಾಣಗಾಪುರದಲ್ಲಿ ಸೋಮವಾರ ನಡೆದಂತಹ ರಾಜ್ಯ ಮಟ್ಟದ ವಿಪ್ರ ಅರ್ಚಕರು ಹಾಗೂ ಪುರೇಹಿತರ ರಾಜ್ಯ ಸಮ್ಮಳನದಲ್ಲಿ ಪಾಲ್ಗಂಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಎಂಎಲ್‍ಸಿ ಅಲ್ಲಂಪ್ರಭು ಪಾಟೀಲ್ ಈ ಸಮುದಾಯಕ್ಕ ಸಿಗಬೇಕಾದಂತಹ ಸವಲತ್ತುಗಳನ್ನು ಕೊಡುವಲ್ಲಿ ಸರ್ಕಾರ ವಗ್ದಾನದಂತೆ ಅನುಷ್ಠಾನಕ್ಕೆ ತರಬೇಉ ಎಂದು ಆಗ್ರಹಿಸಿದ್ದಾರೆ.

ಸಮ್ಮೇಳನದ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿರುವ ಅಲ್ಲಂಪ್ರಭು ಪಾಟೀಲರು ಪರಿಷತ್ತಿನ ರಾಜ್ಯಮಟ್ಟದ ಈ ಸಮಾವೇಶ ಅರ್ಚಕರ ಮತ್ತು ಪುರೋಹಿತರ ಕಲ್ಯಾಣಕ್ಕಾಗಿ ಶ್ರಮಿಸುವ ನಾಂದಿಗೀತೆಯಾಗಲಿ. ಸಮಾಜದಲ್ಲಿ ಧಾರ್ಮಿಕ ಸಂಸ್ಕಾರದ ಉಳಿಸಿ ಬೆಳೆಸುವಲ್ಲಿ ಪುರೋಹಿತರು ಮತ್ತು ಅರ್ಚಕರ ಪಾತ್ರ ದೊಡ್ಡದು ಎಂದಿದ್ದಾರೆ.

Contact Your\'s Advertisement; 9902492681

ಲೋಕ ಕಲ್ಯಾಣಕ್ಕಾಗಿ ಅರ್ಚಕರು- ಪುರೋಹಿತ ಸಮುದಾಯದವರು ಸದಾಕಾಲ ಪೂಜೆ- ಪುನಸ್ಕಾರದಲ್ಲಿ ತೊಡಗಿದವರಾಗಿದದಾರೆ. ಇವರಿಗೆ ಸರ್ಕಾರ 3 ಲಕ್ಷ ರು ಅನುಆನ ನೀಡುವುದಾಗಿ ನೀಡಿದ್ದ ಭರವಸೆ ಇಂದಿಗೂ ಅನು,್ಠನವಾಗಿಲ್ಲ. ತಕ್ಷಣ ಈ ಅನುದಾನ ಬಿಡುಗಡೆಯಾಗಬೇಕು. ಇವರಿಗೂ ಸರ್ಕಾರದ ನೆರವು ಸಮಯಕ್ಕೆ ಸರಿಯಾಗಿ ದೊರಕುವಂತಾಗಲಿ ಎಂದಿದ್ದಾರೆ.

ದೇಶದ ಏಳಿಗೆಯಲ್ಲಿಯೂ, ಹಿಂದಿನ ಹಲವಾರು ಸ್ವಾತಂತ್ರ್ಯ ಹೋರಾಟದಲ್ಲಿಯೂ ಈ ವರ್ಗ ಶ್ರಮಿಸಿದೆ. ಕೋರೊನಾ ಕಾಲದಲ್ಲಿ ಈ ಸಮೂಹ ಸಾಕಷ್ಟು ತೊಂದರೆಗೆ ಒಳಗಾಗಿತ್ತು. ಹೀಗಾಗಿ ಈ ಸಮುದಾಯವರಿಗೆ ಸರ್ಕಾರ ಬೆಬಂಲವಾಗಿ ನಿಲ್ಲಬೇಕು. ಜೊತೆಗೇ ಕೇಂದ್ರ ಜಾರಿಗೆ ತಂದಿರುವ ಆರ್ಥಿಕ ಹಿಂದುಳಿದವರಿಗೆ ಮೀಸಲು ನೀಡುವ ನಿಯಮ ಬೇಗ ರಾಜ್ಯದಲ್ಲಿಯೂ ಜಾರಿಗೆ ತರುವ ಊಲಕ ಈ ಸಮೂಹಕ್ಕೆ ಸರ್ಕಾರ ನೆರವಿನ ಹಸ್ತ ಚಾಚಬೇಕು ಎಂದು ಅಲ್ಲಂಪ್ರಭು ಪಾಟೀಲ್ ಆಗ್ರಹಿಸಿದ್ದಾರೆ.

ಗಾಣಗಾಪುರದಲ್ಲಿ ಇಂದು ನಡೆದ ರಾಜ್ಯಮಟ್ಟದ ವಿಪ್ರ ಅರ್ಚಕರ ಮತ್ತು ಪುರೋಹಿತರ ಸಮಾವೇಶ ಬಹಳ ಯಶಸ್ವಿಯಾಗಿ ನೆರವೇರಿತು. ಈ ಸಮಾವೇಶದ ಯಶಸ್ಸಿಗಾಗಿ ಶ್ರಮಿಸಿದ ಕಲಬುರಗಿ ಜಿ¯್ಲÉಯ ಸಂಘದ ಎ¯್ಲÁ ಪದಾಧಿಕಾರಿಗಳಿಗೆ  ಅಭಿನಂದನೆಗಳು. ವಿಶೇಷವಾಗಿ ಪರಿಷತ್ತಿನ ಜಿ¯್ಲÁ ಅದ್ಯP್ಷÀರಾದ ಗುಂಡಾಚಾರ್ಯ ನರಿಬೋಳ ಅವರಿಗೆ ಅಭಿನಂದನೆಗಳನ್ನು ಅಲ್ಲಂಪ್ರಭು ಪಾಟೀಲರು ತಿಳಿಸಿದ್ದಾರೆ.

ಗಾಣಾಪುರದಲ್ಲಿ ಸೋಮವಾರ ಬೆಳಗ್ಗೆಯೇ ಭೇಟಿ ನೀಡಿದ್ದ ಅಲ್ಲಂಪ್ರಭು ಪಾಟೀಲ್ ಅಲ್ಲಿ ನಡೆದಂತಹ ಪೂಜಾದಿಗಳಲ್ಲಿ ಭಾಗವಹಿಸಿದ್ದರು. ನಂತರ ನಡೆದ ಗಾಯತ್ರಿ ಮೆರವಣಿಗೆ, ಸಮಾವೇಶದ ಕಲಾಪಗಳಲ್ಲಿ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here