ಯುವಕರು ದೇಶದ ಉತ್ತಮ ಪ್ರಜೆಗಳಾಗಲಿ

0
16

ಕಲಬುರಗಿ: ಇಂದಿನ ಯವ ಜನತೆ ದೇಶದ ಶಕ್ತಿ ಯಾಗಿದ್ದು, ಉತ್ತಮ ಜೀವನ ನಡೆಸಲು ಮುಂದಾಗಬೇಕು ಎಂದು ಎಂ.ಬಿ ನಗರ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ ತೀಗಡಿ ಕರೆ ನೀಡಿದರು.

ಎಂ.ಬಿ ನಗರ ಪೊಲೀಸ್ ಠಾಣೆಯಲ್ಲಿ ಆಯೋಜಿಸಿದ್ದ ಸಾರ್ವಜನಿಕರ ಬೀಟ್ ಸಭೆಯಲ್ಲಿ ಕನ್ನಡ ಭೂಮಿ ಜಾಗೃತಿ ಸಮಿತಿ ಜಿಲ್ಲಾ ಅಧ್ಯಕ್ಷ ಪ್ರಶಾಂತ್ ತಂಬೂರಿ ಅವರ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಯುವಕರು ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಬೇಕು.ದುಶ್ಚಟಗಳಿಗೆ ಬಲಿಯಾಗಬಾರದು.ಇಸ್ಪೀಟ್,ಜೂಜುಗಳಂಥ ಕೆಟ್ಟ ಅಭ್ಯಾಸಗಳು ಯುವಕರ ಭವಿಷ್ಯ ಹಾಳು ಮಾಡುತ್ತವೆ.ಅಂಥವುಗಳಿಂದ ದೂರವಿದ್ದು ಸಮಾಜಮುಖಿ ಕೆಲಸ ಮಾಡಬೇಕು ಎಂದ ಅವರು ಯುವಕರಲ್ಲಿ ಕ್ರೀಡಾ ಆಸಕ್ತಿ ಬೆಳೆಸಲು ವೈಯಕ್ತಿಕವಾಗಿ ಸಹಾಯ ಮಾಡಲಾಗುವುದು ಎಂದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಸಮಿತಿಯ ವಿದ್ಯಾರ್ಥಿ ಘಟಕದ ಅಧ್ಯಕ್ಷ ಶರಣಯ್ಯ ಇಕ್ಕಳಕಿಮಠ,ಜೈಭೀಮ ಸಾಲೇಗಾಂವ ಸೇರಿದಂತೆ ವಿವಿಧ ಬಡಾವಣೆಯ ಹಿರಿಯರು, ಯುವಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here