ಸುರಪುರ:ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರ ಸಭೆ

0
15

ಸುರಪುರ: ನಗರದ ಟೈಲರ್ ಮಂಜಿಲ್‍ನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮುಖಂಡರ ಸಭೆ ನಡೆಸಲಾಯಿತು.

ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಯುವ ಮುಖಂಡ ಮಲ್ಲಿಕಾರ್ಜುನರಡ್ಡಿ ಅಮ್ಮಾಪುರ ಮಾತನಾಡಿ,ಕಲ್ಯಾಣ ರಾಜ್ಯ ಪ್ರಗತಿ ಪಕ್ಷವು ಈಗತಾನೆ ಎಲ್ಲೆಡೆ ತನ್ನ ಪದಾಧಿಕಾರಿಗಳನ್ನು ನೇಮಕ ಮಾಡುತ್ತಿದ್ದು,ಅದರಂತೆ ನಮ್ಮ ಸುರಪುರ ವಿಧಾನ ಸಭಾ ಕ್ಷೇತ್ರ ಎರಡೂ ತಾಲೂಕಿನಲ್ಲಿ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಈಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಎಲ್ಲಾ ಕ್ಷೇತ್ರದಲ್ಲಿ ಅಭ್ಯಾರ್ಥಿಗಳನ್ನು ಹಾಕಲಿದ್ದು,ಅದರಂತೆ ನಮ್ಮ ಕ್ಷೇತ್ರದಲ್ಲಿಯೂ ಅಚ್ಚರಿಯ ರೀತಿಯಲ್ಲಿ ಅಭ್ಯಾರ್ಥಿಯನ್ನು ನಿಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೆ ತಾವೆಲ್ಲ ಇಂದು ಸಭೆಯಲ್ಲಿ ಭಾಗವಹಿಸಿದ ಮುಖಂಡರು ನಿರಂತರವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡು ಮುಂಬರುವ ವಿಧಾನಸಭಾ ಚುನಾವಣೆಯೊಳಗಾಗಿ ಪಕ್ಷ ಸಂಘಟನೆ ಮಾಡಿ ನಮ್ಮ ಅಭ್ಯಾರ್ಥಿ ಗೆಲ್ಲುವ ನಿಟ್ಟಿನಲ್ಲಿ ಪ್ರತಿ ಮನೆಗೂ ಪಕ್ಷದ ಉದ್ದೇಶವನ್ನು ತಲುಪಿಸುವ ಕೆಲಸ ಮಾಡುವಂತೆ ತಿಳಿಸಿದರು.ಶೀಘ್ರದಲ್ಲಿಯೇ ಇನ್ನೊಂದು ಸಭೆ ಮಾಡಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಪಕ್ಷದ ಸಂಸ್ಥಾಪಕರಾದ ಜಿ.ಜನಾರ್ಧನರೆಡ್ಡಿಯವರಿಂದ ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರವನ್ನು ಕೊಡಿಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ದೊಡ್ಡಪ್ಪ ಮುದನೂರ,ಕೃಷ್ಣರೆಡ್ಡಿ ಮುದನೂರ,ಮಲ್ಲಣ್ಣ ಸಾಹುಕಾರ,ಅಣ್ಣಪ್ಪ ಅಗ್ನಿ,ಶರಣು ಅಂಗಡಿ,ಸತೀಶ್ ಜಾಲಿಬೆಂಚಿ,ಮಹೇಶ ರಾವೂರ್,ಪಾಚುಪಯ್ಯ ಬಡಿಗೇರ,ರಘು ತನಿಕೇದಾರ,ಚನ್ನು ಕೋನ್ಹಾಳ,ದಸರಥ ದೊರಿ,ನಾಗರಾಜ್ ಮಲ್ಲಿಬಾವಿ,ಚನ್ನರೆಡ್ಡಿ ಸುರಪುರ,ಉದಯ ಗುಳಗಿ,ಹಣಮಂತ ತನಿಕೇದಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here