ಪ್ರಜಾಧ್ವನಿ ಯಾತ್ರೆಗೆ ಸಿದ್ದರಾಮಯ್ಯ ಆಗಮನ:50 ಸಾವಿರ ಜನ ಸೇರುವ ನಿರೀಕ್ಷೆ-ಆರ್.ವಿ.ನಾಯಕ

0
7

ಸುರಪುರ:ಇದೇ ಫೆಬ್ರವರಿ 10 ರಂದು ದೇವತ್ಕಲ್ ಗ್ರಾಮದಲ್ಲಿ ನಡೆಯಲಿರುವ ಪ್ರಜಾಧ್ವನಿ ಯಾತ್ರೆಗೆ ಮಾಜಿ ಮುಖ್ಯಮಂತ್ರಿಗಳು ಹಾಗೂ ವಿಧಾನಸಭೆ ವಿರೋಧಪಕ್ಷದ ನಾಯಕರಾದ ಸಿದ್ದರಾಮಯ್ಯನವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಿಳಿಸಿದರು.

ದೇವತ್ಕಲ್ ಗ್ರಾಮದಲ್ಲಿ ಕಾರ್ಯಕ್ರಮದ ತಯಾರಿ ವೀಕ್ಷಿಸಿ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಫೆ 10 ರಂದು ಬೆಳಿಗ್ಗೆ 10:30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.ಹೆಲಿಕಾಪ್ಟರ್ ಮೂಲಕ ಸಿದ್ದರಾಮಯ್ಯನವರು ಸೇರಿದಂತೆ ಅನೇಕ ಮುಖಂಡರು ಆಗಮಿಸಲಿದ್ದು,ಎಲ್ಲರನ್ನು ಹೆಲಿಪ್ಯಾಡ್‍ನಿಂದ ಕಾರ್ಯಕ್ರಮದ ವೇದಿಕೆವರೆಗೂ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದು ತಿಳಿಸಿದರು.

Contact Your\'s Advertisement; 9902492681

ಕಾರ್ಯಕ್ರಮದಲ್ಲಿ ಸುಮಾರು 50 ಸಾವಿರಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಜನರು ಸೇರುವ ನಿರೀಕ್ಷೆಯಿದೆ.ಸುಮಾರು 25 ಸಾವಿರ ಆಸನಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ವೇದಿಕೆಯ ಬಲಭಾಗ ಮುಂದೆ ಊಟದ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.ಈಗಾಗಲೇ 400 ಬೈ 120 ಫೀಟ್‍ನ ವೇದಿಕೆ ಸಿದ್ಧತೆ ಸಾಗಿದೆ ಎಂದು ತಿಳಿಸಿದರು.

ಪ್ರಜಾಧ್ವನಿ ಯಾತ್ರೆಯಲ್ಲಿ ಸಿದ್ದರಾಮಯ್ಯನವರ ಜೊತೆಗೆ ಮುಖಂಡರಾದ ಈಶ್ವರ ಖಂಡ್ರೆ,ಸತೀಶ ಜಾರಕಿಹೊಳೆ,ಎಂ.ಬಿ.ಪಾಟೀಲ್ ,ಡಾ:ಶರಣಪ್ರಕಾಶ್ ಪಾಟೀಲ್, ಪ್ರಿಯಾಂಕ ಖರ್ಗೆ,ಝಮೀರ್ ಅಹ್ಮದ್ ಖಾನ್,ಬಸವರಾಜ ರಾಯರೆಡ್ಡಿ,ಮಾಜಿ ಸಂಸದ ಬಿ.ವಿ ನಾಯಕ ಸೇರಿ ಅನೇಕ ಮುಖಂಡರು ಆಗಮಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ವಿಠ್ಠಲ್ ಯಾದವ್,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ,ವೆಂಕೋಬ ಯಾದವ್,ರಾಜಾ ವೇಣುಗೋಪಾಲ ನಾಯಕ,ಭೀಮರಾಯ ಮೂಲಿಮನಿ,ಸುರೇಶ ತಂಬಾಕೆ,ನಿಂಗಣ್ಣ ಕೊಡೆಸೂರ,ಬಲಭೀಮರಾಯ ಗಂಟಿ,ನಂದಪ್ಪ ಮೇಟಿ,ಹಣಮಂತ್ರಾಯ ಗಂಟಿ,ವೆಂಕಟೇಶ ಕರಡಿಗುಡ್ಡ,ಪರಣ್ಣಗೌಡ ಕೋನಾಳ,ಮಂಜು ಯಾದವ್, ತಿಮ್ಮಣ್ಣ ನಾಯಕ, ಅಯ್ಯಪ್ಪಗೌಡ, ಬಸವಂತರಾಯ ನಾವದಗಿ, ಲಕ್ಷ್ಮಣ ದೇವತ್ಕಲ್,ಹಣಮಂತ್ರಾಯ ಶುಕ್ಲ,ಚಂದ್ರು ಹೆಬ್ಬಾಳ,ಅಮರಯ್ಯ ಸ್ವಾಮಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here