Monday, July 15, 2024

ಜೀವ ಹನಿ 💦💧

ಜೀವ ಹನಿ 💦💧

ಜಲವಿಲ್ಲದೇ ಜೀವವೇ ನಿಲ್ಲದು
ಜೀವವಿಲ್ಲದೇ ಜೀವನವೆಂಬುದು ಅರಳದು
ಜೀವ ಜಲವೇ ಜೀವಿಗಳಿಗೆ ಅಮೃತವು
ಅದರಿಂದಲೇ ನೆಮ್ಮದಿ ನಮ್ಮೀ ಜನ್ಮವು.

ಮನುಜ ಜೀವನಕೆ ಮಾತ್ರವೇ ಅಲ್ಲ
ಪಶು ಪಕ್ಷಿ ಪ್ರಾಣಿ ಪ್ರಪಂಚಕು ಬೇಕಲ್ಲ
ನೀರು ಕುಡಿದೇ ಚಿಗುರಿ ಬೆಳೆದು
ಆಹಾರ ಕೊಡುವ ಹಸಿರಿಗೂ ಬೇಕಲ್ಲ.

ಜಿವ ಉಳಿಯಲು ಆಹಾರ ಬೇಕು
ಆಹಾರ ಬೆಳೆಯಲು ನೀರಿರಬೇಕು
ಆಹಾರ ತಿಂದು ನೀರು ಕುಡಿದು
ಸದೃಢವಾಗಲು ಶುದ್ಧ ಜಲವು ಬೇಕು.

ಗ್ರಾಮ ಜನತೆಯ ಅನುಕೂಲಕೆ
ಶುದ್ಧ ಕುಡಿಯುವ ನೀರಿನ ಯೋಚನೆ
ತಂದಿತು ಸರ್ಕಾರ ಹಳ್ಳಿ ಹಳ್ಳಿಗಳಿಗೆ
ಜಲಜೀವನ ಮಿಷನ್ ಯೋಜನೆ.

ಕೇಂದ್ರ ಸರ್ಕಾರದ ಹರ್ ಘರ್ ಜಲ್
ಕಲ್ಯಾಣ ಕರ್ನಾಟಕ ಜನತೆ ದಿಲ್ ಖುಷ್
ಕಳಪೆ ಕಾಮಗಾರಿಗೆ ಎತ್ತಿದರಲ್ಲಾ ಬಿಲ್
ಅಧಿಕಾರಿಗಳ ದುರಾಸೆಗೆ ಯೋಜನೆ ಟುಸ್.

ಕನ್ನಡಿ ಹಿಡಿಯುವ ಕಳಪೆ ಕೆಲಸಕ್ಕೆ
ಬನ್ನಿ ಬನ್ನಿ ಗ್ರಾಮದ ಬಂಧುಗಳೇ
ಮುಗ್ಧ ಜನರನ್ನು ವಂಚಿಸುವ ಯತ್ನಕ್ಕೆ
ಎಚ್ಚರಿಕೆ ಘಂಟೆ ಬಾರಿಸುವ ವೇಳೆ

ಆರೋಗ್ಯ ಭಾಗ್ಯ ಕರುಣಿಸಿ
ಜೀವ ಉಳಿಸುವುದು ಶುದ್ಧ ನೀರು
ಅನಾರೋಗ್ಯಕ್ಕೆ ಜೀವಿಗಳ ತುತ್ತಾಗಿಸಿ
ಜೀವ ತೆಗೆಯುವುದು ಅಶುದ್ಧ ನೀರು.

ಜಾಗೃತ ನಾವಾಗಿ ಉಳಿಸಲೇ ಬೇಕು
ಮಾಡಿಯಾದರೂ ಉಗ್ರ ಚಳುವಳಿ
ಯೋಜನೆ ಸಮರ್ಪಕವಾದರೆ ಸಾಕು
ಇದುವೇ ನಾಡಿಗೆ ನಮ್ಮಯ ಬಳುವಳಿ .

– ಭೀಮಶೇಟ್ಟಿ ಮುಕ್ಕಾ ಭೀಮಾ ಮಿಷನ ಅದ್ಯಕ್ಷರು ಚಿಂಚೋಳಿ

RELATED ARTICLES

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here

- Advertisment -

Most Popular