ಕಲಬುರಗಿ: ಸಿಎಂ ಬಸವರಾಜ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಜೆಟ್ ಎಲ್ಲಾ ವರ್ಗದ ಹಿತವನ್ನು ಕಾಯುವ ಜನಸ್ನೇಹಿ ಬಜೆಟ್ ಇದಾಗಿದೆ ಎಂದು ಶಹಾಬಾದ ತಾಲೂಕಾ ಬಿಜೆಪಿ ಮಂಡಲ ಅಧ್ಯಕ್ಷ ಅಣವೀರ ಇಂಗಿನಶೆಟ್ಟಿ ತಿಳಿಸಿದ್ದಾರೆ.
ಮಹಿಳೆಯರಿಗೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ನಿರೋದ್ಯೋಗಿಗಳಿಗೆ 2ಸಾವಿರ ರೂ. ಮಾಶಾಸನ ನೀಡುವ ಯೋಜನೆಗಳು, ಕಾರ್ಮಿಕರಿಗೆ 500 ರೂ. ಮಾಶಾಸನ,ರೈತರಿಗೆ ಭೂಸಿರಿ ಯೋಜನೆ,ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ, ಸಹಾಯಕ ಕಾರ್ಯಕರ್ತರು ಹಾಗೂ ಬಿಸಿಯೂಟ ತಯ್ಯಾರಕರಿಗೆ ಮಾಸಿಕ ಗೌರವ ಧನ ಹೆಚ್ಚಳ, ವಿದ್ಯಾಶಕ್ತಿ ಯೋಜನೆ, ರೈತರಿಗೆ ನೀಡುತ್ತಿದ್ದ ಅಲ್ಪಾವಧಿ ಸಾಲದ ಮಿತಿಯನ್ನು 3ರಿಂದ 5 ಲಕ್ಷದವರೆಗೆ ಏರಿಕೆ, ಸಣ್ಣ ಮತ್ತು ಅತಿ ಸಣ್ಣ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ, ರೈತರ ಬೆಳೆ ಖರೀದಿಸಲು ಬೆಂಬಲ ಬೆಲೆ ಅನುದಾನ ಹೆಚ್ಚಳ,ಗೃಹಿಣಿಯರಿಗೆ ಮಾಸಿಕ 500 ರೂ., ಸೇರಿದಂತೆ ರೈತರು, ಮಹಿಳೆಯರಿಗೆ ಬಂಪರ್ ಕೊಡುಗೆ ನೀಡುವ ಮೂಲಕ ರಾಜ್ಯದ ಜನರಿಗೆ ಜನಸ್ನೇಹಿ ಬಜೆಟ್ ನೀಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.